Public News
ಚಿತ್ರದುರ್ಗ : ಜಿಲ್ಲೆಯ ಭರಮಸಾಗರ ಹೋಬಳಿಯ ಇಸಾಮುದ್ರ ಗ್ರಾಮದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಚಿತ್ರದುರ್ಗ ಪೋಲಿಸರು ಯಶಸ್ವಿಯಾಗಿದ್ದಾರೆ.
ಇದೇ ತಿಂಗಳ ಜುಲೈ 23 ರಂದು 13 ವರ್ಷದ ಶಶಿಕಲಾ ಎಂಬ ಬಾಲಕಿ ಬಹಿರ್ದೆಸೆಗೆ ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಬಾಲಕಿಯನ್ನು ಮೆಕ್ಕೆಜೋಳ ಹೊಲದಲ್ಲಿ ಬಲವಂತವಾಗಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಘಟನೆ ನಡೆದಿತ್ತು. ಈ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ರಾಧಿಕಾ ಜಿ ಇವರು 6 ಜನ ಸಿಪಿಐಗಳು, 15 ಪಿಎಸ್ಐ ಗಳು ಹಾಗೂ ಇತರೆ 50 ಜನ ಸಿಬ್ಬಂದಿಗೊಂಡ ತಂಡವನ್ನು ರಚಿಸಿದ್ದರು. ಇನ್ನು ಕೊಲೆ ಆರೋಪಿಯ ಜಾಡು ಹಿಡಿದು ಬೆನ್ನತ್ತಿದ ಪೊಲೀಸ್ ಸಿಬ್ಬಂದಿಗಳು ಮಂಗಳವಾರ ಇಸಾಮುದ್ರ ಗ್ರಾಮದ ನಾಗರಾಜ (24) ವರ್ಷ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃತ್ಯದ ಹಿನ್ನೆಲೆ : ಆಪಾದಿತ ನಾಗರಾಜನನ್ನು ಕೂಲಂಕುಶವಾಗಿ ವಿಚಾರಣೆ ಮಾಡಿದಾಗ ಸದರಿ ಆರೋಪಿಯು ಮೃತ ಅಪ್ರಾಪ್ತ ಬಾಲಕಿಯ ಮನೆಯ ಪಕ್ಕದಲ್ಲಿ ಮನೆಯಲ್ಲಿ ತಾಯಿ ಮತ್ತು ಅಣ್ಣನೊಂದಿಗೆ ವಾಸವಾಗಿದ್ದು, ಮೃತ ಬಾಲಕಿಯು ಸ್ನಾನಕ್ಕೆ ಹೋಗುವಾಗ ಮತ್ತು ಇತರೆ ಸಂದರ್ಭದಲ್ಲಿ ಆಕೆಯನ್ನು ನೋಡಿದ ಆರೋಪಿಗೆ ಅವಳ ಮೇಲೆ ಈತನಿಗೆ ಇಷ್ಟ ವಾಗಿರುತ್ತದೆ. ಬಾಲಕಿ ಬಹಿರ್ದೆಸೆ ಮುಗಿಸಿ ವಾಪಸ್ ಬರುವಾಗ ಎದುರುಗಡೆಯಿಂದ ಬಂದ ಆರೋಪಿಯು ಆಕೆಯನ್ನು ಹಿಡಿದುಕೊಂಡು ಕೈಯಿಂದ ಬಾಯಿಮುಚಿ, ಮೆಕ್ಕೆಜೋಳದ ಫಸಲಿರುವ ಜಮೀನಿನಲ್ಲಿ ಬಾಯಿಮುಚ್ಚಿ ಅತ್ಯಾಚಾರ ಮಾಡಿರುತ್ತಾನೆ. ಇದಾದ ನಂತರ ಮೃತಳು ತನ್ನ ಹೆಸರನ್ನು ಆಕೆಯ ತಂದೆ ತಾಯಿಗೆ ಹೇಳಬಹುದು ಎಂದು ತಿಳಿದು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುತ್ತಾನೆ.
ಸರಿ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿದ ಅಧಿಕಾರಿಗಳಿಗೆ ಜಿಲ್ಲಾ ಎಸ್ಪಿ ಅಭಿನಂದಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.