Kshetra Samachara
Local News Subject:
ಕಲಘಟಗಿ: ಸೈಕಲ್ ನಿಂದ ತಯಾರಿಸಿದ ಕುಂಟೆಯಿಂದ ಕೃಷಿ ಮಾಡಿದ ರೈತ
City:
Hubballi-Dharwad
Video Thumbnail:
Video:
Category:
Agriculture
Body:
ಕಲಘಟಗಿ: ತಾಲೂಕಿನ ಮುಕ್ಕಲ್ ಗ್ರಾಮದ ರೈತರೊಬ್ಬರು ಸ್ವತಃ ಸೈಕಲ್ ನಿಂದ ತಯಾರಿಸಿದ ಸೈಕಲ್ ಕುಂಟೆಯ ಸಹಾಯದಿಂದ ಎಡಿ ಹೊಡೆದು ಕೃಷಿ ಮಾಡಿದ್ದಾರೆ.
ಗ್ರಾಮದ ಶರಣಪ್ಪ ಸಹದೇವಪ್ಪ ಗ್ಯಾನಪ್ಪ ನವರ್ ಎಂಬ ರೈತ ಇಂತಹ ವಿನೂತನ ಪ್ರಯೋಗ ಮಾಡಿದ್ದಾರೆ.
ಬಡ ರೈತನಾಗಿರುವ ಶರಣಪ್ಪ ಎತ್ತುಗಳನ್ನು ಖರೀದಿಸಲಾಗದ ಕಾರಣ ತಮ್ಮ ಹಳೆಯ ಸೈಕಲ್ ನ್ನೇ ಪರಿವರ್ತನೆ ಮಾಡಿ ಎಡಿ ಹೊಡೆಯಲು ಬಳಕೆ ಮಾಡಿದ್ದಾರೆ.
ಮುಂಗಾರಿನ ಗೋವಿನಜೋಳವನ್ನು ಮೂರು ಎಕರೆ ಕೃಷಿ ಭೂಮಿಯಲ್ಲಿ ಬಿತ್ತಿದ್ದು , ಚೆನ್ನಾಗಿ ಬೆಳೆ ಹುಟ್ಟಿ ಬಂದಿರುತ್ತದೆ.ಎತ್ತುಗಳು ಇಲ್ಲದ ಕಾರಣ ಇವರು ಮನೆಯಲ್ಲಿಯೇ ಸ್ವತಃ ಸೈಕಲ್ ನಿಂದ ತಯಾರಿಸಿದ ಸೈಕಲ್ ಕುಂಟೆ ಸಹಾಯದಿಂದ ಎಡಿ ಹೊಡದು ಕೃಷಿ ಚಟುವಟಿಕೆ ಮಾಡಿದ್ದಾರೆ.
ಇದಲ್ಲದೇ ಸೈಕಲ್ ನಲ್ಲಿ ಕಳೆದ ವರ್ಷ ಬೀಜ ಬಿತ್ತುವ ಸೈಕಲ್ ರಂಟೆ ತಯಾರಿಸಿದ್ದು ಗಮನಾರ್ಹವಾಗಿದೆ.
Reach Count:
30860