Public News
News Subject:
ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ಯುವಕ
Video Thumbnail:
Video:
Category:
Human Stories
Body:
ಕಂಪ್ಲಿ: ತನಗೆ ಕಚ್ಚಿದ ನಾಗರಹಾವನ್ನು ಯುವಕ ಕೈಯಲ್ಲಿ ಹಿಡಿದು 13ಕಿ.ಮೀ ಬೈಕ್ನಲ್ಲಿ ಕ್ರಮಿಸಿ ಅರೋಗ್ಯ ಕೇಂದ್ರಕ್ಕೆ ಬಂದಿದ್ದಾನೆ. ದಾರಿಯುದ್ದಕ್ಕೂ ಈ ದೃಶ್ಯ ಕಂಡ ಜನ ಕಕ್ಕಾಬಿಕ್ಕಿಯಾಗಿದ್ದಾರೆ. ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದ ವಾಲ್ಮೀಕಿ ಕಾಡಪ್ಪ(25) ಅವರಿಗೆ ನಾಗರಹಾವು ಕಚ್ಚಿದೆ ಕೂಡಲೇ ಇನ್ನೊಬ್ಬರ ನೆರವಿನಿಂದ ಬೈಕ್ ಮೂಲಕ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾನೆ.
ಈ ವೇಳೆ ಹಾವನ್ನು ಬಿಟ್ಟು ಬರುವಂತೆ ಸ್ಥಳೀಯರು ಯುವಕನಿಗೆ ಹೇಳಿದ್ದಾರೆ. ಒತ್ತಯಕ್ಕೆ ಮಣಿದ ಯುವಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಹಾವನ್ನು ಬಿಟ್ಟು ಬಂದಿದ್ದಾನೆ. ನಂತರ ಸ್ಥಳೀಯರು ಹಾವನ್ನು ಹೊಡೆದು ಸಾಯಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Reach Count:
55381