Public News

News Subject: 
ಸಂಚಾರಿ ವಿಜಯ ಉಸಿರಾಡುತ್ತಿದ್ದಾರೆ : ಸಿಎಂ ಸಂತಾಪದ ಬೆನ್ನಲ್ಲೆ ವೈದ್ಯರಿಂದ ಮಾಹಿತಿ
Category: 
Cinema
Body: 

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ ಎನ್ನುವ ಸುದ್ದಿ ಈಗಾಗಲೇ ಎಲ್ಲರ ಕಿವಿಗೆ ಬಿದ್ದಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು, ಸಿನಿಮಾ ನಟರು ಸಂತಾಪ ಸೂಚಿಸಿದ ಬೆನ್ನಲ್ಲೆ ವೈದ್ಯರು ಸಂಚಾರಿ ವಿಜಯ ಸತ್ತಿಲ್ಲ ಎಂದಿದ್ದಾರೆ. ಹೌದು ನಟ ಸಂಚಾರಿ ವಿಜಯ್ ಇನ್ನು ಉಸಿರಾಡುತ್ತಿದ್ದಾರೆ. ಮೆದುಳು ನಿಷ್ಕ್ರಿಯವಾದ ತಕ್ಷಣ ಯಾವುದೇ ವ್ಯಕ್ತಿ ಸಾಯಲ್ಲ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಪೊಲೋ ಆಸ್ಪತ್ರೆ ನ್ಯೂರೋ ಸರ್ಜನ್ ಡಾ.ಅರುಣ್ ನಾಯ್ಕ್ ತಿಳಿಸಿದ್ದಾರೆ.

ವಿಜಯ್ ಮೃತಪಟ್ಟಿರುವುದಾಗಿ ನಾವು ಘೋಷಿಸಿಲ್ಲ. ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಯಡಿಯೂರಪ್ಪನವರು ಸಂಚಾರಿ ವಿಜಯ್ ಅವರಿಗೆ ಸಂತಾಪ ಸೂಚಿಸಿದ್ದರು. ಅಲ್ಲದೆ ಅವರ ಅಗಲಿಕೆಯನ್ನು ಬರಿಸುವ ಶಕ್ತಿ ಅವರು ಕುಟುಂಬಕ್ಕೆ ನೀಡಲಿ ಎಂದು ಹೇಳಿದ್ದರು. ಇತ್ತ ವೈದರು ಮೆದುಳು ನಿಷ್ಕ್ರಿಯಗೊಂಡಿರುವುದು ನಿಜ. ಆದರೆ ಅವರ ಇತರ ಅಂಗಗಳು ಕಾರ್ಯನಿರ್ವಹಿಸುತ್ತಿವೆ. ಮೆದುಳು ನಿಷ್ಕ್ರಿಯ ಎಂದಾಕ್ಷಣ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಲು ಆಗಲ್ಲ. ಹೃದಯ ಬಡಿತ ನಿಂತಾಗ ಮಾತ್ರ ಮೃತ ಎಂದು ಹೇಳಬಹುದು ಎಂದಿದ್ದಾರೆ.

Reach Count: 
97244