Kshetra Samachara
ಬ್ರಹ್ಮಾವರ: ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕೆಲಸವಿಲ್ಲದೆ, ಖರ್ಚಿಗೆ ಕಾಸೂ ಇಲ್ಲದ್ದರಿಂದ ಆಸಾಮಿಯೊಬ್ಬ ತನ್ನ ಸಹಚರರೊಂದಿಗೆ ಪಕ್ಕದ ಮನೆ ಬಚ್ಚಲಿನ ತಾಮ್ರದ ಹಂಡೆ ಕದ್ದು ಸಿಕ್ಕಿ ಬಿದ್ದ ಘಟನೆ ಬ್ರಹ್ಮಾವರ ತಾಲೂಕಿನ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಾಡಿಯಲ್ಲಿ ಜೂ.10ರಂದು ನಡೆದಿದ್ದು, ಆರೋಪಿಗಳು ಜೈಲು ಸೇರಿದ್ದಾರೆ.
ಇಲ್ಲಿನ ಬನ್ನಾಡಿ ಶಾಲೆ ಸಮೀಪದ ಸಂತೋಷ್ ಕುಮಾರ್ ಶೆಟ್ಟಿಯವರ ಮನೆಯಲ್ಲಿ ಈ ಕಳವು ನಡೆದಿದ್ದು, ಈ ಕುರಿತು ಅವರು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಠಾಣಾಧಿಕಾರಿ ಸಂತೋಷ್ ಬಿ. ನೇತೃತ್ವದ ತಂಡ, ಅನುಮಾನದ ಮೇಲೆ ಸ್ಥಳೀಯ ನಿವಾಸಿಯೋರ್ವನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ತಾನೇ ಕಳವು ಮಾಡಿದ್ದೇನೆ ಎಂಬುದನ್ನು ಬಾಯ್ಬಿಟ್ಟಿದ್ದಾನೆ. ಲಾಕ್ ಡೌನ್ ನಿಂದಾಗಿ ಖರ್ಚಿಗೆ ಕಾಸಿಲ್ಲದಿರುವುದರಿಂದ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡು, ತನ್ನ ಜತೆಗಿದ್ದವರ ಬಗ್ಗೆ ಕೂಡ ಮಾಹಿತಿ ನೀಡಿದ. ಆರೋಪಿಗಳನ್ನೆಲ್ಲ ಕೋರ್ಟ್ ಗೆ ಹಾಜರುಪಡಿಸಿ ಹಿರಿಯಡ್ಕ ಜೈಲ್ ಗೆ ತಳ್ಳಲಾಗಿದ್ದು, ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.