Kshetra Samachara
Local News Subject:
ಅನ್ಲಾಕ್ ಡೇ ಒನ್ :ಕೃಷ್ಣನಗರಿಯಲ್ಲಿ ವಾಹನಗಳ ದಟ್ಟಣೆ,ಜನಸಂಚಾರ ಬಿರುಸು
City:
Udupi
Mangalore
Video Thumbnail:
Category:
COVID
Body:
ಉಡುಪಿ: ರಾಜ್ಯಾದ್ಯಂತ ಇಂದು ಹಂತಹಂತವಾಗಿ ಲಾಕ್ ಡೌನ್ ಅನ್ ಲಾಕ್ ಆಗುತ್ತಿದೆ.ಮೊದಲ ದಿನವಾದ ಇಂದು ಉಡುಪಿಯಲ್ಲಿ ಜನ ಸಂಚಾರ ಹೆಚ್ಚಿದ್ದು ನಗರದೆಲ್ಲೆಡೆ ವಾಹನಗಳ ಸಂಚಾರ ಕಂಡು ಬಂತು.ನಗರದ ಪ್ರಮುಖ ರಸ್ತೆಗಳಲ್ಲಂತೂ ಕೆಲವೆಡೆ ಟ್ರಾಫಿಕ್ ಜಾಮ್ ಆಯ್ರು.ಇಷ್ಟು ದಿನಗಳ ಕಾಲ ಮನೆಯಲ್ಲೇ ಕುಳಿತ ಜನ ಒಮ್ಮೆಲೇ ತಮ್ಮ ತಮ್ಮ ಕೆಲಸಗಳಿಗಾಗಿ ಹೊರಗಡೆ ಬಂದಿದ್ದಾರೆ.
ಮದ್ಯಾಹ್ನ ಎರಡು ಗಂಟೆತನಕ ಅಗತ್ಯ ವಸ್ತುಗಳ ಅಂಗಡಿಗಳಿಗೆ ತೆರೆಯಲು ಅವಕಾಶಗಳಿದ್ದು ,ಕೆಲವು ಸೇವೆಗಳಿಗೆ ಇಂದಿನಿಂದ ವಿನಾಯಿತಿ ಇದೆ.ಕಾರ್ಖಾನೆ ಮತ್ತಿತರ ಫ್ಯಾಕ್ಟರಿಗಳಲ್ಲಿ ಅರ್ಧದಷ್ಟು ಜನರಿಗೆ ಅವಕಾಶ ಇರುವುದರಿಂದ ನಗರದಲ್ಲಿ ಜನಸಂದಣಿ ಜಾಸ್ತಿ ಇದೆ.ಇದೇ ವೇಳೆ ನಗರದಾದ್ಯಂತ ಬೆಳಿಗ್ಗಿನಿಂದಲೇ ಮಳೆ ಇದ್ದು ಜನರು ಮತ್ತು ವಾಹನ ಸವಾರರು ಪರದಾಡುತ್ತಿದ್ದಾರೆ.
Reach Count:
10679