Public News

News Subject: 
ಜೂನ್ 15ರಂದು ಸಿಎಂ ಹಾಗೂ ಸಚಿವರ ಮನೆ ಎದುರು ರೈತರ ಪ್ರತಿಭಟನೆ
Upload Image: 
PublicNext-474715-514354-Politics-Agriculture-node
Category: 
Politics
Agriculture
Body: 

ಬೆಂಗಳೂರು: ಕೊರೊನಾ ಗಂಡಾಂತರದ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲೂ ಬೀರಿದೆ. ಅದರಂತೆ ಕೃಷಿ ಕ್ಷೇತ್ರ ಕೂಡ ತತ್ತರಿಸಿದೆ. ಬೆಳೆಗೆ ಮಾರುಕಟ್ಟೆ ಇಲ್ಲದೇ, ಸೂಕ್ತ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಈ ಸನ್ನಿವೇಶದಲ್ಲಿ ವಿಶೇಷ ಪ್ಯಾಕೇಜ್ ಒದಗಿಸುವಂತೆ ಮತ್ತು ಕೊರೋನಾ ಮೂರನೇ ಅಲೆಗೆ ತಕ್ಷಣವೇ ಸಿದ್ಧತೆ ಮಾಡಿಕೊಳ್ಳುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ.

ಇದೇ 15ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದ ಎದುರು ಮತ್ತು ಸಚಿವರು ಹಾಗೂ ಬಿಜೆಪಿಯ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಿವೆ.

Reach Count: 
43465