Kshetra Samachara

Local News Subject: 
ಅಣ್ಣಿಗೇರಿ: ನಲವಡಿಯ ರಾಡಿಹಳ್ಳ, ಯರನಹಳ್ಳ ಹೂಳೆತ್ತಲು ಜಿಲ್ಲಾಧಿಕಾರಿಗೆ ಒತ್ತಾಯ
City: 
Hubballi-Dharwad
Upload Image: 
PublicNext--514273--node-nid
Category: 
Others
Body: 

ಅಣ್ಣಿಗೇರಿ: ತಾಲೂಕಿನ ನಲವಡಿ ಗ್ರಾಮ ಹದ್ದಿನ ರಾಡಿಹಳ್ಳ ಮತ್ತು ಯರನಹಳ್ಳದ ಹೂಳೆತ್ತಿ ರೈತರಿಗೆ ಅನುಕೂಲ ಮಾಡಬೇಕು ಎಂದು ರೈತ ಮುಖಂಡ ಪ್ರದೀಪ ಲೆಂಕನಗೌಡ್ರ ಒತ್ತಾಯಿಸಿದ್ದಾರೆ.

ಈ ಎರಡು ಹಳ್ಳಗಳಲ್ಲಿ ಮುಳ್ಳು ಕಂಟೆಗಳು ಮತ್ತು ಮಣ್ಣು ತುಂಬಿ ಹಳ್ಳಗಳಲ್ಲಿ ನೀರು ಸರಿಯಾಗಿ ಹೋಗುತ್ತಿಲ್ಲ. ಈ ಕುರಿತು ಮೌಖಿಕವಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಇದರ ಕಡೆ ಗಮನ ಹರಿಸಿ ಹಳ್ಳಗಳಲ್ಲಿರುವ ಮುಳ್ಳು ಕಂಟೆಗಳು ಮತ್ತು ಮಣ್ಣನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಬೇಕು. ರೈತರು ಹೊಲಗಳಿಗೆ ಹೋಗಲು ಸುಸಜ್ಜಿತವಾದ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಈ ಸಂದರ್ಭದಲ್ಲಿ ಪ್ರದೀಪ ಲೆಂಕನಗೌಡ್ರ ತಿಳಿಸಿದರು.

ಮುಂಬರುವ ಒಂದು ತಿಂಗಳೊಳಗಾಗಿ ರೈತರಿಗೆ ಅನುಕೂಲ ಮಾಡದಿದ್ದರೆ ತಾಲೂಕಿನ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಖಡಕ ಎಚ್ಚರಿಕೆ ನೀಡಿದರು.

Reach Count: 
10544