Public News
News Subject:
ರಾಜಸ್ಥಾನದಲ್ಲಿ 'ಕೈ' ನಾಯಕರ ಕಿತ್ತಾಟ ಮತ್ತೆ ಬಹಿರಂಗ: ಸಚಿನ್ ಪೈಲಟ್ ಬಣದಿಂದ ಫೋನ್ ಟ್ಯಾಪ್!
Upload Image:
Category:
Politics
Body:
ಜೈಪುರ: ರಾಜಸ್ಥಾನ ಕಾಂಗ್ರೆಸ್ ನಾಯಕರ ಕಿತ್ತಾಟ ಮುಂದುವರಿದಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣದ ವಿರುದ್ಧ ಸಚಿನ್ ಪೈಲಟ್ ಬಂಡಾಯ ಬಣವು ಗಂಭೀರ ಆರೋಪ ಮಾಡಿದೆ.
ಸಚಿನ್ ಪೈಲಟ್ ಬಣದ ಶಾಸಕ ವೇದ ಪ್ರಕಾಶ್ ಸೋಲಂಕಿ ಅವರು, "ಕೆಲ ಶಾಸಕರು, ನಾಯಕರ ಫೋನ್ ಟ್ಯಾಪ್ ಆಗಿದೆ. ಇದೀಗ ಶಾಸಕರಿಗೆ ತಾವು ಯಾವುದಾರು ಎಜೆನ್ಸಿ ಬಲೆಗೆ ಬೀಳುವ ಅಪಾಯವಿದೆ. ನನ್ನ ಫೋನ್ ಟ್ಯಾಪ್ ಮಾಡಲಾಗಿದೆಯಾ ಎನ್ನವುದು ತಿಳಿದಿಲ್ಲ. ಆದರೆ ಕೆಲ ಶಾಸಕರು ತಮ್ಮ ತಮ್ಮ ಫೋನ್ ಟ್ಯಾಪ್ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ" ಎಂದು ತಮ್ಮ ಪಕ್ಷ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.
ಅಶೋಕ್ ಗೆಹ್ಲೋಟ್ ವಿರುದ್ಧ ಮುನಿಸಿಕೊಂಡಿರುವ ಸಚಿನ್ ಪೈಲಟ್ ಅವರ ಆಪ್ತರು ಕಾಂಗ್ರೆಸ್ ಬಿಡಲು ಹೊರ ನಡೆಯುವ ಮುಂದಾಗಿದೆ. ಮಧ್ಯ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ಅವರು ಸಚಿನ್ ಪೈಲಟ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮುನಿಸು ಮಾತ್ರ ಕಡಿಮೆಯಾಗಿಲ್ಲ. ಇದೀಗ ಮತ್ತೆ ದೆಹಲಿಗೆ ಹಾರಿರುವ ಸಚಿನ್ ಪೈಲಟ್, ರಾಜಸ್ಥಾನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ.
Reach Count:
51315