Kshetra Samachara

Local News Subject: 
ಧಾರವಾಡದಲ್ಲಿ ರಸ್ತೆಗಿಳಿದ ವಿವಿಧ ಸಂಘಟನೆಗಳು
City: 
Hubballi-Dharwad
Video Thumbnail: 
PublicNext--617304--node-nid
Category: 
Politics
Body: 

ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಭಾರತ ಬಂದ್‌ಗೆ ಕರೆ ನೀಡಿದ್ದು, ಧಾರವಾಡದಲ್ಲಿ ಎಸ್‌ಕೆಎಸ್‌, ಎಐಡಿಎಸ್‌ಓ ಸೇರಿದಂತೆ ಹಲವು ಸಂಘಟನೆಗಳು ರಸ್ತೆಗಿಳಿದಿವೆ.

ಬೆಳಿಗ್ಗೆಯಿಂದಲೇ ಸಂಘಟನೆಗಳ ಕಾರ್ಯಕರ್ತರು ರಸ್ತೆಗಿಳಿದಿದ್ದು, ಖಾಸಗಿ ವಾಹನಗಳನ್ನು ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಎಂದಿನಂತೆ ವಾಹನ ಸಂಚಾರ ನಡೆಯುತ್ತಿದ್ದು, ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ವಾಹನ ತಡೆಯಲು ಮುಂದಾದ ಪ್ರತಿಭಟನಾಕಾರರಿಗೆ ಪೊಲೀಸರು ರಸ್ತೆ ತಡೆ ನಡೆಸದಂತೆ ಸೂಚನೆ ಕೂಡ ನೀಡುತ್ತಿದ್ದಾರೆ.

Reach Count: 
31768
Show Detail Screen Advertisement: 
Yes