Kshetra Samachara

Local News Subject: 
ಕುಂದಗೋಳ : ಭರ್ತಿಯಾಯ್ತು ಗುಡೇನಕಟ್ಟಿ ಗ್ರಾಮದ ಕೆರೆ ಬಾಗಿನ ಅರ್ಪಣೆ
City: 
Hubballi-Dharwad
Video Thumbnail: 
PublicNext--553386--node-nid
Category: 
Nature
Body: 

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಸತತವಾಗಿ ಐದಾರು ದಿನಗಳ ಮಳೆರಾಯನ ಆರ್ಭಟಕ್ಕೆ ಗ್ರಾಮದ ಜನರ ದಾಹ ತಣಿಸುವ ಒಂಬತ್ತು ಎಕರೆ ವಿಸ್ತಾರದ ಕುಡಿಯುವ ನೀರಿನ ಕೆರೆ ಭರ್ತಿಯಾಗಿದೆ.

ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಮುತೈದೆಯರು ಪೂಜೆ ಮಾಡಿದರೇ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಲ್ಲಿಕಾರ್ಜುನ ಸೊರಟೂರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ತುಂಬಿದ್ದು ಒಂದೇಡೆ ಸಂತೋಷವಾಗಿದೆ ಒಂದು ಕಡೆ ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿದ್ದು ಮನಸ್ಸಿಗೆ ನೋವಾಗಿದೆ ಎಂದರು. ಕೆರೆಗೆ ನೀರು ಸಂಗ್ರಹವಾದ ಬಳಿಕ ಗ್ರಾಮದ ಯುವಕರು ಹಾಗೂ ರಜೆ ಮೇಲೆ ಊರಿಗೆ ಬಂದ ಯೋಧ ಭರತೇಶ್ ಯೋಗಪ್ಪನವರ, ಕಲ್ಮೇಶ್ ಹುಬ್ಬಳ್ಳಿ ಕೆರೆ ಹೆಚ್ಚಿನ ಪ್ರಮಾಣದ ನೀರು ಕೆರೆಗೆ ಬರದಂತೆ ಕೊಡಿ ಕಟ್ಟಲು ಸಹಾಯ ಮಾಡಿ ದೇಶ ಸೇವೆ ಜೊತೆ ಗ್ರಾಮ ಸೇವೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ವೇದಮೂರ್ತಿ ಚೆನ್ನವೀರಸ್ವಾಮಿ ಹೀರೆಮಠ, ಬಸವರಾಜ ಯೋಗಪ್ಪನವರ, ಗುರುಪಾದಪ್ಪ ಹೊಸಳ್ಳಿ, ಸಕ್ರಪ್ಪ ಕಮ್ಮಾರ, ಚಿದಾನಂದ ಕುಸುಗಲ್ಲ, ಮಹಾಂತೇಶ ಕೆಂಚಣ್ಣವರ, ಪರಶುರಾಮ ಹೊಸಳ್ಳಿ, ಬಸವರಾಜ ಕಮಲದಿನ್ನಿ, ಬಸಪ್ಪ ಹರಿಜನ, ನಾಗವ್ವ ಎಮ್ಮಿ, ಲಲಿತಾ ಹೊನ್ನಿಹಳ್ಳಿ, ಅನಸಕ್ಕ ಹಾಗೂ ಗ್ರಾಮದ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Reach Count: 
20925
Show Detail Screen Advertisement: 
Yes