Kshetra Samachara

Local News Subject: 
ಹಳೆಯಂಗಡಿ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಪ್ರಭೋದಿನಿ ವರದಾಶ್ರಮಸ್ವಾಮಿ ಪಾಠಶಾಲೆ ಆರಂಭ
City: 
Udupi
Mangalore
Category: 
Cultural Activity
Body: 

ಹಳೆಯಂಗಡಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ "ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಪ್ರಭೋದಿನಿ ವರದಾಶ್ರಮಸ್ವಾಮಿ ಪಾಠಶಾಲೆ" ಶನಿವಾರ ಬೆಳಿಗ್ಗೆ ದೇವಸ್ಥಾನದ ಧರ್ಮದರ್ಶಿ ಋಷಿವರ್ಯ ಡಾ| ಯಾಜಿ. ನಿರಂಜನ ಭಟ್ಟರು ವಿಧ್ಯಾರ್ಥಿಗಳಿಗೆ "ವೇದಾರಂಭ" ಪಾಠ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ ದೇವರನ್ನು ನಂಬಿದರೆ ಪ್ರತಿಫಲ ಸಿದ್ಧ ವೇದಾಧ್ಯಯನ ಶ್ರದ್ಧೆಯಿಂದ ಓದಿದರೆ ಸನ್ಮಾರ್ಗ ಸಾಧ್ಯ ಎಂದು ಆಶೀರ್ವಚನ ನೀಡಿದರು

ನಿವೃತ್ತ ಉಪನ್ಯಾಸಕ ಸೋಂದಾ ಭಾಸ್ಕರ ಭಟ್ ಮಾತನಾಡಿ ಶ್ರೀ ವಾಣಿ ವಿಧ್ಯಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಆರ್.ಎಸ್ ಹನುಮಂತ ರಾವ್ ರವರ ನೆನಪಿನಲ್ಲಿ ಸುಪುತ್ರ ಆರ್.ಎಚ್ ಶಾರದಾಪ್ರಸಾದ್ ಉಚಿತ ಪಾಠಶಾಲೆಯ ಸಂಪೂರ್ಣ ವ್ಯವಸ್ಥೆಯನ್ನು ವೇದಕೃಷಿಕ ಕೆ.ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ತಮ್ಮ ಸಂಸ್ಥೆಯಿಂದಲೇ ನಿರ್ವಹಿಸುತ್ತಾರೆ.ಎಂದರು.

ಅವರು ಮಾತನಾಡಿ ಇನ್ನು ಕೆಲವೇ ತಿಂಗಳಲ್ಲಿ ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯಾರಂಭಿಸಲಿರುವ ಸಂಸ್ಥೆಗೆ ಸೇರಲು ಸರ್ವರಿಗೂ ಮುಕ್ತಾವಕಾಶವಿದೆ ಎಂದರು.ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಕ್ಷೇತ್ರ ತಂತ್ರಿಗಳಾದ ಯಾಜಿ ಎಚ್ ದಿವಾಕರ ಭಟ್ ಹಾಗೂ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು

Reach Count: 
3571
Show Detail Screen Advertisement: 
Yes