Kshetra Samachara

Local News Subject: 
ಕೆಂಚನಕೆರೆ: ಯೋಗದಿಂದ ಉತ್ತಮ ಆರೋಗ್ಯ; ಜಯ ಮುದ್ದು ಶೆಟ್ಟಿ
City: 
Mangalore
Upload Image: 
PublicNext-497171-552968-Mangalore-Health-and-Fitness-node
Category: 
Health & Fitness
Body: 

ಮುಲ್ಕಿ: ಮುಲ್ಕಿ ಸಮೀಪದ ಕೆಂಚನಕೆರೆ ಪತಂಜಲಿ ಯೋಗ ಕೇಂದ್ರದ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಯೋಗ ಗುರು ಜಯ ಮುದ್ದು ಶೆಟ್ಟಿ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು ಪ್ರತಿದಿನ ಅರ್ಧಗಂಟೆಯಾದರೂ ಯೋಗ, ಪ್ರಾಣಾಯಾಮ ಮಾಡಿದರೆ ಜೀವನ ಸಂಜೀವಿನಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯೋಗ ಗುರು ಜಯ ಮುದ್ದು ಶೆಟ್ಟಿ ಯವರನ್ನು ಗೌರವಿಸಲಾಯಿತು. ಜಾನಪದ ಸಂಶೋಧಕ ಡಾ ಗಣೇಶ್ ಅಮೀನ್ ಸಂಕಮಾರ್, ಯೋಗ ಶಿಕ್ಷಕ ಯಾದವ ದೇವಾಡಿಗ ಮತ್ತು ಮಧು ಆಚಾರ್ಯ ಯೋಗದ ಅನುಭವವನ್ನು ಹಂಚಿಕೊಂಡರು. ತಿಮ್ಮಪ್ಪ ಕೋಡಿಕಲ್, ದಿನೇಶ್ ಶೆಟ್ಟಿ ಬಲವಿನ ಗುಡ್ಡೆ ದಿನೇಶ ಆಚಾರ್ಯ ಕಿನ್ನಿಗೋಳಿ ಉಪಸ್ಥಿತರಿದ್ದರು.

Reach Count: 
2459
Show Detail Screen Advertisement: 
Yes