Kshetra Samachara

Local News Subject: 
ಹುಬ್ಬಳ್ಳಿ: ಮಳೆಯ ಅವಾಂತರ ಹುಬ್ಬಳ್ಳಿ-ಅಂಕೋಲಾ ರಸ್ತೆ ಬಂದ್: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಹೆಬ್ಬಾರ
City: 
Hubballi-Dharwad
Category: 
Politics
Infrastructure
Body: 

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆಯು ಮುಂದುವರೆದಿದ್ದು, ಕಳೆದ ಎರಡೂ ದಿನಗಳಿಂದ ಹುಬ್ಬಳ್ಳಿ-ಅಂಕೋಲಾ ರಸ್ತೆ ಬಂದ ಆಗಿರುವ ಹಿನ್ನಲೆಯಲ್ಲಿ ಸಚಿವ ಶಿವರಾಮ್ ಹೆಬ್ಬಾರ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೌದು.. ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದ್ದು, ಅರಬೈಲ್ ಘಾಟ್ ನಲ್ಲಿ ಹೆದ್ದಾರಿ ಕುಸಿತಗೊಂಡಿದೆ. ಈ ಹಿನ್ನಲೆಯಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೆದ್ದಾರಿ ಪರಿಶೀಲನೆ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಮೂರು ದಿನಗಳಿಂದ ರಸ್ತೆ ಸಂಚಾರ ಬಂದ್ ಆಗಿದೆ. ಇನ್ನೂ ಪಿಡಬ್ಲ್ಯೂಡಿ ಅಧಿಕಾರಿಗಳು ಏನು ಮಾಡ್ತಾ ಇದೀರಾ..? ನೀವು ಮಾಡ್ತಾ ‌ಇರೋ‌ ಕೆಲಸದಿಂದ ನಮ್ಮ ಸರ್ಕಾರದ ಮಾನ ಹರಾಜು ಆಗ್ತಾ ಇದೆ. ಇನ್ನೂ ಮೂರು ದಿನಗಳಲ್ಲಿ ರಸ್ತೆಯನ್ನು ಸರಿ ಮಾಡಿಸಿಬೇಕು. ಇದಕ್ಕೆ ಏನ್ ಮಸಿನರಿ ಬೇಕು ಹೇಳಿ, ನಾನ್ ಕೊಡ್ತೆನಿ.ಆದರೆ ನೆಪ ಹೇಳಿ ಜನರಿಗೆ ತೊಂದರೆ ಕೊಡಬೇಡಿ ಎಂದು ಅವರು ಸೂಚನೆ ನೀಡಿದರು.

Reach Count: 
29244
Show Detail Screen Advertisement: 
Yes