Public News

News Subject: 
ಉದ್ಯಮಿಯಿಂದ 5 ಲಕ್ಷ ರೂ.ಗೆ ಡಿಮ್ಯಾಂಡ್; ಕ್ರೈಂ ಇನ್‌ಸ್ಪೆಕ್ಟರ್ ಸೇರಿ ಮೂವರ ವಿರುದ್ಧ ಕೇಸ್‌
Upload Image: 
PublicNext--552801--node-nid
Category: 
Crime
Body: 

ಬೆಂಗಳೂರು: ಉದ್ಯಮಿ ಗೋಪಿನಾಥ್ ಎಂಬುವರಿಂದ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಆರೋಪದ ಮೇಲೆ ವೈಟ್ ಫೀಲ್ಡ್ ಕ್ರೈಂ ಇನ್​ಸ್ಪೆಕ್ಟರ್ ರೇಣುಕಾ, ಎಸ್‌ಐ ಗಣೇಶ್ ಹಾಗೂ ಕಾನ್ಸ್‌ಟೇಬಲ್ ಹೇಮಂತ್ ವಿರುದ್ಧ ಎಸಿಬಿಯಲ್ಲಿ ಎಫ್‌ಐಆರ್​​ ದಾಖಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿಸಬಾರದು ಎಂದರೆ 10 ಲಕ್ಷ ರೂ. ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರು ಎಂದು ಆರೋಪ ಕೇಳಿ ಬಂದಿದೆ. ಉದ್ಯಮಿ ಗೋಪಿನಾಥ್​​ ಅವರನ್ನು ಬ್ಯಾಂಕಿಗೆ ಕರೆದೊಯ್ದು ಬಲವಂತವಾಗಿ 5 ಲಕ್ಷ ರೂಪಾಯಿಗಳನ್ನ ಡ್ರಾ ಮಾಡಿಸಿ. ಉಳಿದ 5 ಲಕ್ಷ ರೂಪಾಯಿಗೆ ಸಮಯ ನೀಡಿ ಕಿರುಕುಳ ನೀಡುತ್ತಿದ್ದರು ಎಂದು ಗೋಪಿನಾಥ್​ ಎಸಿಬಿಗೆ ದೂರು ನೀಡಿದ್ದರು. ಇದರ ಅನ್ವಯ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ರೇಣುಕಾ ಸೇರಿದಂತೆ ಪೊಲೀಸ್​​ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

Reach Count: 
18544
Show Detail Screen Advertisement: 
Yes