Kshetra Samachara
ಹುಬ್ಬಳ್ಯಾಗ 1989 ರಾಗ ಚೇತನಾ ಕಾಲೋನಿ ಅಸ್ಥಿತ್ವಕ್ಕೆ ಬಂದಿತಿ ಅವತ್ತ ಅಲ್ಲಿ 6 ಇಂಚಿಂದ ಒಳಚರಂಡಿ ಮಾಡಿದ್ರ ಅವಂತ್ತಿಂದ ಇವತ್ತಿನಮಟಾ ಅದರ ನಿರ್ವಹಣೆ ಮಾಡದಕ್ಕ ಅದ ಮುಚ್ಚಿ ಹೋಗೇತಿ ಇನ್ನಿ ಏರಿಯಾದಾಗ ಒಂದ್ ಗಟ್ಟಾರ ಇಲ್ಲಾ ಮಳಿ ಬಂತಂದ್ರ ಚೇತನಾ ಕಾಲೋನಿ ಸಮುದ್ರ ಆದಂ ಆಕೇತ ನೋಡ್ರಿ..
ಬರೋಬ್ಬರಿ 1600 ಮಂದಿ ಇರು ಏರಿಯಾದಾಗ ಹಿಂಗ್ ನೀರ ನಿಂತ ಬಿಡತೈತಿ ಮುಂದಕ ಹೋಗಾಕ ದಾರೆ ಇಲ್ಲ ನೋಡಿ ಇನ್ನ ಕಾರ್ಪೊರೇಷನ್ ಕಂಪ್ಲೇಂಟ್ ಮಾಡಿದ್ರೆ ಅವರ ಕಿಮ್ಮತ್ತ ಕೊಡವಲ್ರ..
ಈ ಭಾಗದ ಶಾಸಕ ಅದ ಜಗದೀಶ ಶೆಟ್ಟರ್ ಚುನಾವಣೆ ಇದ್ದಾಗ ಹ್ಯಾಡ್ ಬಿಲ್ ಹಂಚಾಕ ಬರೋದ ಬಿಟ್ರ ಈ ಕಡೆ ಹಣಿಕೆ ಹಾಕಂಗಿಲ್ಲ ಅವ್ರ..
ಈ ಕಾಲೋನಿಗೆ ಹಚ್ಚಕೊಂಡ ವಿನೂತನಾ ಕಾಲೋನಿ, ಆಜಾದ ಪಾರ್ಕ್ , ಸಿದ್ದಗಂಗಾ ಲೇಔಟ್ , ಲಾಲಬಹುದ್ದೂರ ಶಾಸ್ತ್ರಿ ನಗರ, ಸದಾಶಿವ ನಗರದಾಗ ಖಾಲಿ ಸೈಟ್ ಅದಾವ ರೀ ಅಲ್ಲಿ ಎಲ್ಲಾ ತೆಗ್ಗ ಬಿದ್ದ ಇಷ್ಟು ನೀರೆಲ್ಲಾ ಅಲ್ಲೇ ಜಮಾ ಆಗಿ ಮತ್ತೆ ಚೇತನಾ ಕಾಲೋನಿಗೆ ರೀವರ್ಸ್ ಹೊಡಿತೇತ ರೀ..
ಒಟ್ಟ ಮಳಿ ಬಂತಂದ್ರ ಇಲ್ಲಿ ಮಂದಿ ಜೀವನಾ ನಡಸೋದ ವಜ್ಜೆ ಆಗೇತಿ ನೋಡ್ರಿ… ಜನಪ್ರತಿನಿಧಿಗೊಳ ಆರಿಸಿ ಬಂದ ಮ್ಯಾಲ ಮಂದಿದು ಒಂದಿಟ ಸಮಸ್ಯೆ ಕೇಳ್ರಿ…
ಇದು ವಿಕ್ಷಕ ವರದಿ