Public News
ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ವಿಚಾರವಾಗಿ ಸಿಎಂ ಯಡಿಯೂರಪ್ಪಗೆ ಅವರ ಪಕ್ಷದವರೇ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ವಕ್ತಾರೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಿಎಸವೈ ಪರ ಬ್ಯಾಟಿಂಗ್ ಮಾಡಿದ್ದಾರೆ.
ಬೆಳಗಾವಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನೊಬ್ಬಳು ಕಾಂಗ್ರೆಸ್ ಪಕ್ಷದ ಶಾಸಕಿ ಆಗಿ ಏನು ಮಾತನಾಡಲ್ಲ. ಆದ್ರೆ ಸರ್ಕಾರ ಕುಂಟಿತ ಆಗಿದೆ ಕೊರೊನಾ ಆದಮೇಲೆ ನಾಯಕತ್ವ ಬದಲಾವಣೆ ಚರ್ಚೆ ಪ್ರಾರಂಭವಾಗಿದೆ. ಇವರು ದೆಹಲಿಗೆ ಹೋದ್ರು ಅವರು ದೆಹಲಿಗೆ ಹೋದ್ರು. ಆದರೆ ತಮ್ಮ ತಮ್ಮ ಜವಾಬ್ದಾರಿಯನ್ನು ಮಂತ್ರಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಸಮಯ ಸಂದರ್ಭ ಅನುಗುಣವಾಗಿ ಹಾಗೇ ಅವಧಿ ಪೂರ್ವಗೊಳಿಸಿಲ್ಲ. ಯಡಿಯೂರಪ್ಪನವರ ಬೆನ್ನಿಗೆ ಅವರ ಪಕ್ಷದವರೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಇನ್ನೂಕಾಂಗ್ರೆಸ್ ಪಕ್ಷದವರು ನಾವು ಚೂರಿ ಹಾಕಲು ಸಾಧ್ಯನಾ.? ಯಡಿಯೂರಪ್ಪನವರು ಅವರು ಯಾರನ್ನ ಬೆಳಸಿದ್ರು, ಅವರು ಯಾರನ್ನ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ರು, ಬಹುಶಃ ಅವರೇ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕೆಂದು ಮಾಡಿದ್ದಾರೆ ಎಂದು ನಾನು ಮಾಧ್ಯಮದಲ್ಲಿ ನೋಡಿರುವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ತಿಳಿಸಿದರು.