Kshetra Samachara
Local News Subject:
ಅಳ್ನಾವರ ತಾಲೂಕಿಗೆ ಸಚಿವ ಪ್ರಹ್ಲಾದ್ ಜೋಶಿ ಭೇಟಿ
City:
Hubballi-Dharwad
Upload Image:
Category:
Politics
Body:
ಅಳ್ನಾವರ: ತಾಲೂಕಿನಾಧ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾಕಷ್ಟು ಅನಾಹುತ ಗಳಾಗಿದ್ದು, ಹುಲಿಕೇರಿ ಇಂದಿರಮ್ಮ ಕೆರೆ ಕಟ್ಟೆ ಒಡೆದು ಅನೇಕ ರೀತಿಯ ತೊಂದರೆಗಳಾಗಿವೆ.ಕೆರೆಯ ಕಟ್ಟೆ ಯೊಡೆದು ಸಾಕಷ್ಟು ಪ್ರಮಾಣದಲ್ಲಿ ನೀರು ಹೊರ ಹರಿಯುತ್ತಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಬೆಳೆ ಹಾನಿ ಕೂಡ ಉಂಟಾಗಿದೆ.
ಇದನ್ನೆಲ್ಲ ವೀಕ್ಷಣೆ ಮಾಡಲು ಇಂದು ಮಧ್ಯಾಹ್ನ ಸಚಿವ ಪ್ರಹ್ಲಾದ್ ಜೋಶಿ ತಾಲೂಕಿಗೆ ಭೇಟಿ ನೀಡಲಿದ್ದಾರೆ.ತಾಲೂಕಿನ ವೀಕ್ಷಣೆ ಅತ್ಯಂತ ಅವಶ್ಯಕ ವಾಗಿದ್ದು,ಏನೆಲ್ಲ ಪರಿಹಾರ ಕಂಡುಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.
ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ.
Reach Count:
12201
Show Detail Screen Advertisement:
Yes