Kshetra Samachara

Local News Subject: 
ಹುಬ್ಬಳ್ಳಿ: ಆನ್ ಲೈನ್ ಕ್ಲಾಸ್ ಗೂ ಮಳೆರಾಯನ ಅಡ್ಡಿ: ಗಂಜಿಕೇಂದ್ರಕ್ಕೆ ಮನವಿ...!
City: 
Hubballi-Dharwad
Video Thumbnail: 
PublicNext--552537--node-nid
Category: 
Nature
Human Stories
Body: 

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಇನ್ನೂ ನಿಂತಿಲ್ಲ. ಮನೆಗಳ ಗೋಡೆಗಳಲ್ಲಿ ಬರುತ್ತಿವೆ, ನೀರು, ಸೋರುತ್ತಿವೆ ಮನೆಗಳು. ಜನರು ಭಯದಲ್ಲಿಯೇ ಜೀವನ ಮಾಡುತ್ತಿದ್ದಾರೆ. ಇನ್ನೂ ಮಕ್ಕಳ ಆನ್ಲೈನ್ ಕ್ಲಾಸ್‌ಗೂ ಮಳೆರಾಯನ ಅಡ್ಡಿ ಮಾಡಿದ್ದಾನೆ.

ಗೋಡೆಗಳಿಂದ ಬರುತ್ತಿರುವ ನೀರನ್ನು ಹೊರಗಡೆ ಹಾಕುವುದೆ ಮಕ್ಕಳಿಗೆ ದೊಡ್ಡ ಕೆಲಸವಾಗಿದೆ‌. ಕುಟುಂಬಸ್ಥರು ರಾತ್ರಿಯಿಡೀ ಮಲಗದೆ ಮನೆಯಲ್ಲಿನ ನೀರನ್ನು ಹೊರಗಡೆ ಹಾಕುತ್ತಿದ್ದಾರೆ. ಧಾರವಾಡ ಜಿಲ್ಲೆಯ ಅಲ್ಲಾಪೂರ ಗ್ರಾಮದಲ್ಲಿ ನಡೆದ ಘಟನೆಯಾಗಿದ್ದು, ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದ ಪರಿಸ್ಥಿತಿಯಾಗಿದೆ.

ಇನ್ನೂ ಇದೇ ರೀತಿ ಮಳೆ ಮುಂದುವರೆದರೆ ನಾವು ಜೀವನ ಮಾಡೋದು ಹೇಗೆ. ನಮ್ಮ ಕಷ್ಟಗಳಿಗೆ ಸ್ಫಂಧಿಸಬೇಕಾಗಿದೆ ಜಿಲ್ಲಾಡಳಿತ. ರಾತ್ರಿ ನೀರಿನಲ್ಲಿ ಜೀವನ ಮಾಡಿದ್ರು ಅಧಿಕಾರಿಗಳು ಬಂದಿಲ್ಲ‌. ಗಂಜಿ ಕೇಂದ್ರ ತೆರೆದು ನಮಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಅಂಗಲಾಚುತ್ತಿದ್ದಾರೆ.

Reach Count: 
37301
Show Detail Screen Advertisement: 
Yes