Kshetra Samachara

Local News Subject: 
ಉಡುಪಿ ನಗರಸಭೆ ಬಳಿ ಕೃತಕ ಜಲಾಶಯ..! ಭೂಕುಸಿತ ಸಂಭವಿಸುವ ಭೀತಿ..!! ಆತಂಕದಲ್ಲಿ ಸಾರ್ವಜನಿಕರು..!
City: 
Udupi
Mangalore
Video Thumbnail: 
PublicNext--552499--node-nid
Category: 
Infrastructure
Body: 

ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ ನಗರಸಭೆ ಕಛೇರಿ ಸನಿಹ, ಹಲವು ವರ್ಷಗಳಿಂದ ಕಾರ್ಯ ನಿರ್ವಸಿಸುತ್ತಿದ್ದ ಹಾಜಿ ಆಬ್ದುಲ್ಲಾ ಚಿಕಿತ್ಸಾಲಯ, ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಭಿವೃದ್ಧಿಯ ಕಾರಣದಿಂದ ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಲಾಯಿತು. ಅದೇ ವಿಶಾಲವಾದ ಸ್ಥಳದಲ್ಲಿ ಇವಾಗ ಸುಮಾರು ಅರವತ್ತು ಅಡಿ ಆಳದ ಗುಂಡಿ ತೋಡಿಡಲಾಗಿದೆ. ಗುಂಡಿಯಲ್ಲಿ ಮಳೆ ನೀರು, ಒಸರು ನೀರು ಜಲಾಶಯದಂತೆ ಸಂಗ್ರಹಗೊಂಡಿದೆ. ನೀರಿನ ಮಟ್ಟವು ಐವತ್ತು ಅಡಿಯ ಆಳದವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

ಗುಂಡಿಯ ಅಂಚಿನ ಸುತ್ತಲೂ ಮಣ್ಣು ಕುಸಿಯದಂತೆ ತಡೆಯೊಡ್ಡಲು, ಯಾವೊಂದು ರಕ್ಷಣೆಯ ನಿರ್ಮಾಣಗಳು ಇಲ್ಲಿಲ್ಲ. ಜೇಡಿ ಮಣ್ಣು ಮೆದುವಾಗಿರುವುದರಿಂದ ಇಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ. ಗುಂಡಿಯ ಅಂಚಿನ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಬಹುಮಹಡಿ ಕಟ್ಟಡ, ವಾಸದ ಮನೆಗಳು ಇವೆ. ಅಕಸ್ಮಾತ್ ಅತಿಯಾಗಿ ಮಳೆ ಸುರಿದು ನೀರಿನ ಮಟ್ಟ ಏರಿಕೆಯಾದರೆ ಭೂಕುಸಿತ ಸಂಭವಿಸಬಹುದು..!

ಅಕ್ಕ ಪಕ್ಕದ ಕಟ್ಟಡಗಳು ಉರುಳಿ ಬಿದ್ದು ದೊಡ್ಡ ಮಟ್ಟದ ದುರಂತ ಸಂಭವಿಸಲೂ ಬಹುದು. ಸ್ಥಳದ ಸುತ್ತಲು ಎತ್ತರದವರೆಗೆ ತಗಡುಸಿಟಿನ ಬೇಲಿ ಹಾಕಿರುವುದರಿಂದ, ಇಲ್ಲಿಯ ಸಮಸ್ಯೆ ಅಧಿಕಾರಿಗಳ ಸಾರ್ವಜನಿಕರ ಅರಿವಿಗೆ ಬಾರದೆ ಅಜ್ಞಾತವಾಗಿದೆ. ಪರಿಸರದಲ್ಲಿ ಆತಂಕ ಮನೆಮಾಡಿದೆ. ತುರ್ತಾಗಿ ಜಿಲ್ಲಾಡಳಿತ, ನಗರಸಭೆ, ಅಪಾಯ ಆಹ್ವಾನಿಸುವ ಈ ಸ್ಥಳವನ್ನು, ಭೂ ವಿಜ್ಞಾನಿ- ಭೂಗರ್ಭ ಶಾಸ್ತ್ರಜ್ಞರ ಮೂಲಕ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.

Reach Count: 
5828
Show Detail Screen Advertisement: 
Yes