Kshetra Samachara

Local News Subject: 
ಕಲಘಟಗಿ: ಗಂಜಿಗಟ್ಟಿ ಕೆರೆಯ ಸೇತುವೆ ಅಭಿವೃದ್ಧಿ ಯಾವಾಗ ?
City: 
Hubballi-Dharwad
Video Thumbnail: 
PublicNext--552491--node-nid
Category: 
Nature
Body: 

ವರದಿ: ಮಲ್ಲಿಕಾರ್ಜುನ ಪುರದನಗೌಡರ

ಕಲಘಟಗಿ: ತಾಲೂಕಿನ ಗಂಜಿಗಟ್ಟಿ ಗ್ರಾಮದ ಅತ್ಯಂತ ದೊಡ್ಡದಾದ ಹಿರೇಕೆರೆ ಮುಂಗಾರಿನ ಮಳೆಗೆ ಮತ್ತೆ ತುಂಬಿದ್ದು,ಕೆರೆಯ ಸೇತುವೆಯನ್ನು ಎತ್ತರಿಸುವ ಗ್ರಾಮಸ್ಥರ ಬೇಡಿಕೆ ಮಾತ್ರ ಈಡೇರದೇ ಭರವಸೆ ಹಾಗೆ ಉಳಿದಿದೆ.

ಕಳೆದ ಬಾರಿ ಹಿರೆಕೆರೆ ಮೈದುಂಬಿ ಉಬ್ಬು ಬಿದ್ದು ಅಪಾರ ನೀರು ಹರಿದಿತ್ತು.ಸೇತುವೆಯ ರಸ್ತೆಯ ಮೇಲೆ ತಾಯಿಯೊಂದಿಗೆ ನಡೆದುಕೊಂಡು ಹೋಗುವಾಗ ಬಾಲಕಿ ನೀರಿನ ಸಳೆವಿಗೆ ಕೊಚ್ಚಿ ಹೋಗಿದ್ದಳು.ಘಟನೆಯ ನಂತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೇತುವೆ ಎತ್ತರಿಸುವ ಭರವಸೆ ನೀಡಿದ್ದರು.ಮತ್ತೆ ಮಳೆಯಾಗಿ ಕೆರೆ ಭರ್ತಿಯಾಗಿ ಮೈದುಂಬಿ ಹರಿಯುತ್ತಿದೆ.ಕೆರೆಯ ಸೇತುವೆ ಅಭಿವೃದ್ಧಿ ಮಾಡಿ ರಸ್ತೆ ಎತ್ತರಿಸುವ ಭರವಸೆ ಮಾತ್ರ ಈಡೇರಿಲ್ಲ.

ಅಪಾಯಕ್ಕೆ ಆಹ್ವಾನ ನೀಡುವಂತೆ ಇರುವ ಸೇತುಯ ರಸ್ತೆಯನ್ನು ಎತ್ತರಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಲು ಅಧಿಕಾರಿಗಳು ಕ್ರಮಕೈಗೊಳ್ಳವರೇ ಎಂಬುದನ್ನು ಕಾದು ನೋಡ ಬೇಕಿದೆ.

Reach Count: 
40620
Show Detail Screen Advertisement: 
Yes