Kshetra Samachara

Local News Subject: 
ಲಂಚ ಪಡೆಯುತ್ತಿರುವ ವೇಳೆ ಎಸಿಬಿ ಕೈಗೆ ಸಿಕ್ಕ ಬಿದ್ದ ಗುಡಿಗೇರಿ ಪೊಲೀಸ್‌
City: 
Hubballi-Dharwad
Upload Image: 
PublicNext-496971-552451-Hubballi-Dharwad-Crime-node
Category: 
Crime
Body: 

ಹುಬ್ಬಳ್ಳಿ : ಅಪಘಾತ ಪ್ರಕರಣದಲ್ಲಿ ಪರಸ್ಪರ ರಾಜಿಯಾಗಿದ್ದ ವ್ಯಕ್ತಿಯ ಬೈಕ್ ಬಿಟ್ಟು ಕಳುಹಿಸಲು, 5,000 ರೂಪಾಯಿ ಲಂಚ ಪಡೆಯುತ್ತಿದ್ದ ಕುಂದಗೋಳ ತಾಲೂಕು ಗುಡಗೇರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಒಬ್ಬರನ್ನು, ಎಸಿಬಿ ಬಂಧಿಸಿದ್ದಾರೆ.

ಹೆಡ್ ಕಾನ್‌ ಸ್ಟೇಬಲ್ ಬಸವರಡ್ಡಿ ವ್ಹಿ ಶ್ರೀಹರಿ ಬಂಧಿತ ಆರೋಪಿ. ಗದಗ ಜಿಲ್ಲೆ ಲಕ್ಷ್ಮೀಶ್ವರ ಮೂಲದ ಶ್ರೀಧರ ಹಿರೇಮಠ ಹಾಗೂ ಮತ್ತೊಬ್ಬರ ಬೈಕ್‌ಗಳ ನಡುವೆ ಇತ್ತೀಚೆಗೆ ಸಣ್ಣ ಅಪಘಾತ ಉಂಟಾಗಿತ್ತು. ಇಬ್ಬರು ಪರಸ್ಪರ ರಾಜಿ ಮಾಡಿಕೊಂಡಿದ್ದರು . ಬಸವರಡ್ಡಿ ಶ್ರೀಹರಿ ಹೀಗಿದ್ದರೂ ಪ್ರಕರಣ ದಾಖಲಿಸಿಕೊಳ್ಳದೇ, ಠಾಣೆಯಲ್ಲಿ ಬೈಕ್ ಇಟ್ಟುಕೊಂಡಿದ್ದ.

ಬೈಕ್ ಬಿಡುಗಡೆಗೆ 5000 ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದ. ಈ ಕುರಿತು ಶ್ರೀಧರ ಅವರು ಎಸಿಬಿಗೆ ದೂರು ನೀಡಿದ್ದರು. ಕಾರ್ಯಾಚರಣೆ ರೂಪಿಸಿದ ಎಸಿಬಿ ತಂಡ, ಶುಕ್ರವಾರ ಠಾಣೆ ಬಳಿ ಲಂಚ ಪಡೆಯುತ್ತಿದ್ದ ಬಸವರಡ್ಡಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಿ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Reach Count: 
26202
Show Detail Screen Advertisement: 
Yes