Kshetra Samachara
Local News Subject:
ಧಾರವಾಡ ಬ್ರೇಕಿಂಗ್: ನ್ಯಾಯಾಧೀಶರ ಎದುರೇ ವಿಷ ಸೇವಿಸಿದ ಸೈಂಟಿಸ್ಟ್ ಮಂಜ್ಯಾ
City:
Hubballi-Dharwad
Gadag
Category:
Crime
Body:
ಧಾರವಾಡ: ನ್ಯಾಯಾಧೀಶರ ಎದುರಲ್ಲೇ ಕೊಲೆ ಆರೋಪಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದೆ.
ಹುಬ್ಬಳ್ಳಿಯ ಸೈಂಟಿಸ್ಟ್ ಮಂಜ್ಯಾ ಎಂಬ ಆರೋಪಿಯೇ ವಿಷ ಸೇವಿಸಿದವನು.
ಸೈಟಿಸ್ಟ್ ಮಂಜ್ಯಾ ಊರ್ಫ ಮಂಜುನಾಥ ಭಂಡಾರಿ ಕೊಲೆ ಆರೋಪವೊಂದನ್ನು ಎದುರಿಸುತ್ತಿದ್ದು, ಅದರ ವಿಚಾರಣೆಗೆ ಆರೋಪಿಯನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಜೈಲಿನಲ್ಲಿ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದ ಮಂಜ್ಯಾ ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ. ಕೂಡಲೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ರಾಣಾಪಾಯದಿಂದ ಮಂಜ್ಯಾ ಪಾರಾಗಿದ್ದು, ಆತನಿಗೆ ಚಿಕಿತ್ಸೆ ಮುಂದುವರೆದಿದೆ
Reach Count:
2