Kshetra Samachara
ಆರಕ್ಷರ ಮನೇಗೆ ಕನ್ನ ಹುಬ್ಬಳ್ಳಿ ಧಾರವಾಡ ಪೊಲೀಸರ ಕಾರ್ಯವೈಖರಿ ಎಂಬ ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿಗೆ ಹುಬ್ಬಳ್ಳಿ ಸಾಯಿನಗರ ಪ್ರದೇಶದ ಜ್ಯೋತಿ ಕಾಲನಿ ನಿವಾಸಿ ಲತಾ ಪಟೇಲ್ ಎಂಬವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕಾಲನಿಯಲ್ಲಿ ನಡೆಯುತ್ತಿರುವ ಕಳ್ಳತನ ಹಾಗೂ ಅಪರಾಧ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಜ್ಯೋತಿ ಕಾಲನಿಯಲ್ಲಿ ಕೆಳೆದ ಕೆಲ ದಿನಗಳಿಂದ ಅನುಮಾನಾಸ್ಪದ ಮುಸುಕುಧಾರಿ ವ್ಯಕ್ತಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ರಾತ್ರಿ ಹೊತ್ತು ತಿರುಗುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಕಾಲನಿಯಲ್ಲಿ ಬೀದಿ ದೀಪಗಳಿಲ್ಲದರುವುದು ಕಳ್ಳಕಾಕರಿಗೆ ಹಬ್ಬದಂತಾಗಿದೆ. ಇಷ್ಟೇ ಅಲ್ಲ ಕೆಲ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಮನೆಮುಂದೆ ನಿಲ್ಲಿಸಿದ್ದ ವಾಹನಗಳ ಗಾಜು, ಕನ್ನಡಿ ಒಡೆದು ಹಾಕುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಈ ಭಾಗದ ಕಾರ್ಪೊರೇಟರ್ ಕಣ್ಣುಮುಚ್ಚಿಕೊಂಡು ಕುಳಿತಿದ್ದಾರೆ.
ಇದು ಜ್ಯೋತಿ ಕಾಲನಿ ಲತಾ ಪಟೇಲ್ ಅವರ ಅಭಿಪ್ರಯ. ನಮ್ಮ ವರದಿ ಹಾಗೂ ಪಟೇಲ್ ಅವರ ಅಭಿಪ್ರಾಯಕ್ಕಾದರೂ ಸಂಬಂಧಪಟ್ಟವರು ಸ್ಪಂದಿಸಲಿ ಎಂಬುದು ಪಬ್ಲಿಕ್ ನೆಸ್ಸ್ಟ್ ಆಶಯ.
ಆತ್ಮೀಯ ಓದುಗರೆ,
ಪಬ್ಲಿಕ್ ನೆಕ್ಸ್ಟ್ ಸುದ್ದಿ ಮಾಧ್ಯಮವನ್ನು ಓದುಗರ ವೇದಿಕೆ ಮಾಡುವ ದೃಷ್ಟಿಯಿಂದ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು " ನಿಮ್ಮ ಧ್ವನಿ ನಮ್ಮ ವೇದಿಕೆ'' ಎಂಬ ಶಿರ್ಷಿಕೆ ಅಡಿ ಪ್ರಕಟಿಸಲು ಉದ್ದೇಶಿಸಿದ್ದೇವೆ.ಸಾರ್ವಜನಿಕ ಹಿತಾಸಕ್ತಿಯ ನಮ್ಮ ವರದಿಗಳ ಬಗ್ಗೆ ನೀವು ಪ್ರತಿಕ್ರಿಯಿಸಬಹುದಾಗಿದೆ. ಧನ್ಯವಾದಗಳು