Kshetra Samachara
ಹುಬ್ಬಳ್ಳಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ಬೆಳಗ್ಗೆ ಕುಂದಗೋಳ ತಾಲೂಕಿನಲ್ಲಿ ನಡೆದಿದೆ.
ಮಮತಾಜ್ ಚವರಗುಡ್ಡ ಎಂಬ ಮಹಿಳೆಯೇ ಅಂಬ್ಯುಲೆನ್ಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ. ಬರದ್ವಾಡ್ ಗ್ರಾಮದಿಂದ ಕುಂದಗೋಳ ತಾಲೂಕಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಂಬ್ಯುಲೆನ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತುರ್ತು ಚಿಕಿತ್ಸಕ ಶಶಿಕುಮಾರ ಮದಲಾರ, ವಾಹನ ಚಾಲಕ ಶಿವನಗೌಡ ಅವರ ಸಹಾಯದೊಂದಿಗೆ ಮಹಿಳೆಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಪತ್ರೆಗೆ ತೆರಳುವವರೆಗೂ ಮೊದಲು ಗರ್ಭಿಣಿಗೆ ತಾಳ್ಮೆ ತೆಗೆದುಕೊಳ್ಳುವಂತೆ ಶಶಿಕುಮಾರ, ಸಾಕಷ್ಟು ಧೈರ್ಯ ತುಂಬಿದ್ದರೂ ಹೆರಿಗೆ ನೋವು ತೀವ್ರವಾಗಿ ಕಂಡು ಬಂದಿದ್ದರಿಂದ ಮಾರ್ಗ ಮಧ್ಯದಲ್ಲೇ ವಾಹನ ಚಾಲಕನ ಸಹಾಯದೊಂದಿಗೆ ಸಹಜ ಹೆರಿಗೆ
ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು ಸದ್ಯ ಕುಂದಗೋಳ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುರ್ತು ಚಿಕಿತ್ಸಕ ಶಶಿಕುಮಾರ, ಮಾರ್ಗ ಮಧ್ಯದಲ್ಲೇ ಸಹಜ ಹರಿಗೆ ಮಾಡಿಸಿ ತಾಯಿ ಹಾಗೂ ಮಗುವನ್ನು ಕಾಪಾಡಿದ್ದಕ್ಕೆ ಮಹಿಳೆಯ ಕುಟುಂಬಸ್ಥರು ಶಶಿಕುಮಾರ ಅವರನ್ನು ಹೃದಯದಿಂದ ಧನ್ಯವಾದ ತಿಳಿಸಿದರಲ್ಲದೇ, ಅಂಬ್ಯುಲೆನ್ಸ್ನಲ್ಲಿ ತುರ್ತು
ಚಿಕಿತ್ಸೆ ನೀಡುತ್ತಿರುವವರು ಸಾಕ್ಷಾತ್ ದೇವರುಗಳೇ ಆಗಿದ್ದಾರೆ ಎಂದು ಕೊಂಡಾಂಡಿದ್ದಾರೆ.