Public News

News Subject: 
ದಿನ ಭವಿಷ್ಯ (19.2.19)
Category: 
Others
Body: 

ಮೇಷ:- ನಿಮ್ಮ ಚಾಕಚಕ್ಯತೆಯನ್ನು ಗಮನಿಸಿ ಏಕಕಾಲದಲ್ಲಿ ಹಲವಾರು ಕಾರ್ಯಯೋಜನೆಗಳು ನಿಮ್ಮ ಬಳಿ ಬರುವವು. ಅವುಗಳಲ್ಲಿ ಪ್ರಮುಖವಾದ ಕಾರ್ಯಗಳನ್ನು ಆದ್ಯತೆಯ ಮೇಲೆ ಹಮ್ಮಿಕೊಳ್ಳಿ, ಒಳಿತಾಗುವುದು.

ವೃಷಭ:- ಹಲವು ಮನೋಲ್ಲಾಸ ಘಟನೆಗಳು ನಡೆಯುವುದರಿಂದ ಹೆಚ್ಚಿನ ಉತ್ಸಾಹ, ಶಕ್ತಿ ಸಾಮರ್ಥ್ಯ‌ಗಳನ್ನು ಹೊಂದುವಿರಿ. ಹಣಕಾಸು ಕೂಡಾ ವಿವಿಧ ಮೂಲಗಳಿಂದ ಬರುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.

ಮಿಥುನ:- ಈಗಾಗಲೇ ದೂರ ಪ್ರವಾಸವನ್ನು ಹಮ್ಮಿಕೊಂಡಿದ್ದಲ್ಲಿ ಅದನ್ನು ಮುಂದೂಡುವುದು ಒಳ್ಳೆಯದು. ಪ್ರಯಾಣದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಅನಿವಾರ್ಯ ಎಂದಾದಲ್ಲಿ ಶ್ರೀ ಲಕ್ಷ್ಮೀನರಸಿಂಹನನ್ನು ನೆನೆದು ಪ್ರಯಾಣ ಮಾಡಿ.

ಕಟಕ:- ಜೀವನದ ಮಹತ್ವದ ಕ್ಷ ಣಗಳು ಸದಾಕಾಲ ಬರುವುದಿಲ್ಲ. ಆದರೆ ಆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಅದನ್ನು ತಿರಸ್ಕರಿಸಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ಬಹು ಬದಲಾವಣೆಗಳು ಉಂಟಾಗುವವು.

ಸಿಂಹ:- ಸಕಾರಾತ್ಮಕ ಚಿಂತನೆಯಿಂದ ಮಹತ್ತರ ಕೆಲಸವನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದು ನಿಮ್ಮ ಪ್ರಸಿದ್ಧಿಗೆ ದಾರಿಯಾಗುವುದು. ಇದರ ಜತೆಗೆ ಖರ್ಚಿನ ದಾರಿ ತೆರೆದುಕೊಳ್ಳುವುದರಿಂದ ಖರ್ಚು ವೆಚ್ಚದ ಕಡೆ ಬಿಗಿ ಹಿಡಿತ ಮಾಡುವುದು ಒಳ್ಳೆಯದು.

ಕನ್ಯಾ:- ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧಾರ ಮಾಡುತ್ತಾರೆಂಬ ಭ್ರಮೆಗೆ ಒಳಗಾಗುವಿರಿ. ಜೀವನದಲ್ಲಿ ಹಲವು ಏರಿಳಿತಗಳನ್ನು ಕಾಣುವಿರಿ. ಮನೋ ನಿಯಾಮಕ ರುದ್ರದೇವರನ್ನು ಭಜಿಸಿ.

ತುಲಾ:- ಮಾತಾ ದುರ್ಗಾದೇವಿಯನ್ನು ಅನನ್ಯ ಭಕ್ತಿಯಿಂದ ಜಪಿಸಿ. ನಿಮ್ಮ ಇಷ್ಟಾರ್ಥ ಸಿದ್ಧಿಸುವುದು. ಬರುವ ದಿನಗಳಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುವುದು. ಅನಗತ್ಯ ವಿಚಾರಗಳನ್ನು ತಲೆಗೆ ತುಂಬಿಕೊಂಡು ಚಿಂತೆ ಮಾಡಬೇಡಿ.

ವೃಶ್ಚಿಕ:- ಸದ್ಯದ ಪರಿಸ್ಥಿತಿಯು ಏಕಾಂತ ಸ್ಥಳವನ್ನು ಬಯಸುತ್ತದೆ. ಅಂತೆಯೇ ಮನಸ್ಸಿನ ನೆಮ್ಮದಿಗಾಗಿ ಅಂತಹ ಸ್ಥಳವನ್ನು ಹುಡುಕಿಕೊಂಡು ಹೋಗುವಿರಿ. ಇದರಿಂದಾಗಿ ಮಾನಸಿಕ ನೆಮ್ಮದಿ ದೊರೆಯುವುದು. ಕಷ್ಟಗಳನ್ನು ಎದುರಿಸುವ ಶಕ್ತಿ ಬರುವುದು.

ಧನುಸ್ಸು:- ನೀವು ಅಂದುಕೊಂಡಿರುವ ಮಹತ್ತರ ಕೆಲಸಗಳಿಗೆ ಅಡೆ ತಡೆಗಳು ಉಂಟಾಗುವ ಸಾಧ್ಯತೆ ಇದೆ. ಗುರು ಮತ್ತು ಶನಿ ನಿಮ್ಮನ್ನು ವಿವಿಧ ರೀತಿಗಳಿಂದ ಪರೀಕ್ಷಿಸುವರು. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗುರು ಹಿರಿಯರ ಆಶೀರ್ವಾದ ಅಗತ್ಯವಿದೆ.

ಮಕರ:- ಹಲವು ವಿಧಗಳಿಂದ ಮಹತ್ತರ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಯಾವುದೇ ಅಡೆತಡೆಗಳಿಲ್ಲದೆ ಮುಗಿಯುವವು. ಬಂಧುಗಳು ಸ್ನೇಹಿತರು ನಿಮಗೆ ಸಹಾಯ ಮಾಡಲು ಮುಂದೆ ಬರುವರು.

ಕುಂಭ:- ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮಗಿದೆ. ಸಕಾರಾತ್ಮಕವಾಗಿ ಮುಂದುವರಿಯಿರಿ. ಇದರಿಂದ ನಿಮ್ಮ ಕೀರ್ತಿ ಗೌರವ ಇಮ್ಮಡಿಯಾಗುವವು. ನೀವು ಕೆಲಸ ಮಾಡುತ್ತಿರುವ ಕಚೇರಿಯ ಎಲ್ಲೆಡೆ ನಿಮ್ಮದೇ ಗುಣಗಾನ ಇರುತ್ತದೆ.

ಮೀನ:- ಒಂದು ಕಡೆ ಮಾಡಿದ ಸಾಲವನ್ನು ತೀರಿಸಲು ಮತ್ತೊಂದು ಕಡೆ ಸಾಲ ಮಾಡಿದಂತೆ ಒಂದು ಸಮಸ್ಯೆಯಿಂದ ಬಿಡುಗಡೆ ಆಯಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ ಒಳಿತಾಗುವುದು.

Reach Count: 
12