Kshetra Samachara
ಗದಗ: ನಗರದ ಜಾಮೀಯಾ ಮಸೀದಿ ಮುಂಭಾಗ ಬೃಹತ್ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯ ಸೇರಿ ಕಪ್ಪುಬಟ್ಟೆ ಕಟ್ಟಿಕೊಂಡು ತ್ರಿವರ್ಣ ಧ್ಜಜವನ್ನು ಹಿಡಿದು ಮೌನ ಮೆರವಣಿಗೆಯೊಂದಿಗೆ ಪಾದಯಾತ್ರೆಯೊಂದಿಗೆ ನಗರದ ಪ್ರಮುಖ ಬೀದಿಗಳ ಮೂಲಕ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸೇರಿ ಹುತಾತ್ಮ ವೀರ ಯೋದರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪಾಕಿಸ್ತಾನದ ಧ್ವಜ ದಹನ ಮಾಡಿ ಪಾಕಿಸ್ತಾನ ಮುರದಾಬಾದ, ಹಿಂದೂಸ್ಥಾನ ಜಿಂದಾಬಾದ ಎಂಬ ಘೋಷಣೆಗಳನ್ನು ಕೂಗಿ ಹುತಾತ್ಮ ವೀರಯೋಧರಿಗೆ ಸಂತಾಪ ಸೂಚಿಸಿದರು.
ಮುಪ್ತಿ ಶಬ್ಬೀರ ಅಹ್ಮದ ಬೋದ್ಲೆಖಾನ ಮಾತನಾಡಿ, ಭಾರತ ದೇಶ ಹಲವಾರು ಪಂಥಗಳಿಂದ ಕೂಡಿದೆ. ಆದರೆ ದೇಶಭಕ್ತಿಯ ವಿಷಯದಲ್ಲಿ ಪಾಪಿ ಪಾಕಿಸ್ತಾನವನ್ನು ಮಟ್ಟ ಹಾಕಲು ನಮ್ಮ ಪ್ರಾಣ ಕಳೆದುಕೊಳ್ಳಲು ಸಿದ್ಧರಿದ್ದೇವೆ. ಇಂತಹ ಭಯಾನಕ ಕೃತ್ಯ ಎಸಗಿರುವ ಭಯೋತ್ಪಾದಕರನ್ನು ಬೇರುಮಟ್ಟದಿಂದ ಕಿತ್ತುಹಾಕಲು ನಾವೆಲ್ಲರೂ ದೇಶದ ಆಡಳಿತದ ಜೊತೆಗೆ ಇದ್ದೇವೆ ಎಂದು ಹೇಳಿದರು.
ಜಮೇತಾ ಉಲ್ಮಾ ಎ ಹಿಂದ್ ಅಧ್ಯಕ್ಷ ಮೌಲಾನ ಇನಾಯುತ ಉಲ್ಲಾ ಪಿರಜಾದೆ ಮಾತನಾಡಿ, ದೇಶದ ಸೈನಿಕರ ಕುಟುಂಬದ ಜೊತೆಗೆ ಇಡೀ ದೇಶದ ನಿವಾಸಿಗಳು ಕಂಬನಿ ಮಿಡಿದಿದ್ದಾರೆ. ಪ್ರಧಾನ ಮಂತ್ರಿಗಳು ತಕ್ಷಣ ಇಂತಹ ಭಯೋತ್ಪಾದಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ನಾವೆಲ್ಲಾ ಕೇಳಿಕೊಳ್ಳುತ್ತೇವೆ ಎಂದರು.
ಮೌಲಾನ ಪಲ್ಲೇದ ಮಾತನಾಡಿ, ವೀರಯೋಧರಿಗೆ ಸಂತಾಪ ಸೂಚಿಸಿ ವಿಶೇಷ ಪ್ರಾರ್ಥನೆ ಮಾಡಿದರು. ಗದಗ-ಬೆಟಗೇರಿ ಎಲ್ಲ ಮುಸ್ಲಿಂ ಸಮಾಜದ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಯುವ ಮುಖಂಡರಾದ ಅಬ್ದುಲ್ ರಶೀದ ಮದರಂಗಿ, ಅಕ್ಬರಸಾಬ ಬಬರ್ಚಿ, ಮಕಬುಲಸಾಬ ಶಿರಹಟ್ಟಿ, ನರಗುಂದಸಾಬ, ರಿಯಾಜ್ ಬ್ಯಾಳಿಗಟ್ಟಿ, ಸಾದಿಕ್ ನರಗುಂದ, ರಾಜಾಖಾನ್ ಪಠಾಣ, ಉಮರಫಾರೂಕ್ ಹುಬ್ಬಳ್ಳಿ, ನಗರಸಭೆ ಸದಸ್ಯರಾದ ಎಂ.ಸಿ. ಶೇಖ, ಬರಕತಅಲಿ ಮುಲ್ಲಾ, ಎಂ.ಎಂ. ಶಾಲಗಾರ, ಜಹಾಂಗೀರ ಮುಳಗುಂದ, ಬಾಷಾಸಾಬ ಮಲ್ಲಸಮುದ್ರ, ಅಬ್ದುಲ್ರಜಾಕ ಶಿರಹಟ್ಟಿ, ಅಬ್ದುಲ್ ರೆಹಮಾನ ರಾಟಿ, ಮುನ್ನಾ ರೇಶ್ಮಿ, ಮಕ್ತಮಸಾಬ ನಾಲಬಂದ, ಇಬ್ರಾಹಿಂ ಮನಿಯಾರ, ಸರಫರಾಜ ಬಳ್ಳಾರಿ, ಎಂ.ಎಂ. ಮಾಳೆಕೊಪ್ಪ, ಇಸ್ಮಾಯಿಲ್ ಮದರಂಗಿ, ಅನ್ವರ ಶಿರಹಟ್ಟಿ, ಜಮೆಯಿತ ಉಲ್ಮಾದ ಪದಾಧಿಕಾರಿಗಳಾದ ಮೌಲಾನ ಜಕ್ರಿಯಾಸಾಬ, ಅಬ್ದುಲ್ ಗಫೂರಸಾಬ ಪಲ್ಲೇದ, ಮುಫ್ತಿ ಅಬ್ದುಲ್ ಸಮದಸಾಬ, ಮುಪ್ತಿ ಅರೀಫಸಾಬ, ಮೌಲಾನ ಶಮಶುದ್ದೀನಸಾಬ, ಮುಫ್ತಿ ಶಬ್ಬೀರಸಾಬ ಹಾಗೂ ಎಲ್ಲಾ ಹಾಫಿಜ್ಗಳು, ಗದಗ-ಬೆಟಗೇರಿ ಎಲ್ಲ ಮುಸ್ಲಿಂ ಸಮಾಜದ ಮುಖಂಡರು, ಮುಸ್ಲಿಂ ಬಾಂಧವರು ಮೌನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.