Public News
ಪುಲ್ವಾಮಾ ಸ್ಫೋಟ ಪ್ರಕರಣ ಹಿನ್ನೆಲೆ ಭಾರತದಲ್ಲಿದ್ದ ತನ್ನ ಹೈಕಮಿಷನರ್ರನ್ನು ಪಾಕಿಸ್ತಾನದ ವಾಪಸ್ಸು ಕರೆಸಿಕೊಂಡಿದೆ.
ದಾಳಿಯಿಂದಾಗಿ ಪಾಕ್ ಮತ್ತು ಭಾರತದ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನಲೆಯಲ್ಲಿ ಪಾಕಿಸ್ತಾನ ಹೈ ಕಮಿಷನರ್ ಸೊಹೈಲ್ ಮೊಹಮದ್ ಅವರನ್ನು ದೇಶಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಅಧಿಕಾರಿಗಳ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿನ ನಮ್ಮ ಹೈ ಕಮಿಷನರ್ ಅವರನ್ನು ಸಮಾಲೋಚನೆಗಾಗಿ ನಾವು ನಮ್ಮ ದೇಶಕ್ಕೆ ಮರಳುವಂತೆ ಕರೆ ನೀಡಿದ್ದು, ಅವರು ಇಂದು ಬೆಳಗ್ಗೆ ದೆಹಲಿ ತೊರೆದಿದ್ದಾರೆ ಎಂದಿದ್ದಾರೆ.
ಪುಲ್ವಾಮ ದಾಳಿಯ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಘಲೆ, ಸೊಹೈಲ್ ಮೊಹಮದ್ ಅವರಿಗೆ ದೆಹಲಿಯಲ್ಲಿ ಬಿಗಿ ಭದ್ರತೆ ಒದಗಿಸಿದ್ದರು.
ಪಾಕ್ನಲ್ಲಿರುವ ಭಾರತದ ಹೈ ಕಮಿಷನರ್ ಅಜತ್ ಬಿಸರಿಯಾ ಅವರನ್ನು ಕೂಡ ದೇಶಕ್ಕೆ ಮರಳುವಂತೆ ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಬಳಿಕ ಶುಕ್ರವಾರ ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಪೌಲ್ ಜೋನ್ಸ್ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನ್ ಜನ್ಜುಹ ಅವರೊಂದಿಗೆ ಸಭೆ ನಡೆಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಯುಎನ್ಎಸ್ಸಿ ಗೊತ್ತುಪಡಿಸಿದ ಭಯೋತ್ಪಾದಕ ಜಾಲಗಳು ಅವರ ಮುಖಂಡರ ನಿಧಿಗಳು ಮತ್ತು ಇತರ ಹಣಕಾಸಿನ ಆಸ್ತಿಗಳನ್ನು ತಕ್ಷಣಕ್ಕೆ ತಡೆಹಿಡಿಯುವಂತೆ ಅಮೆರಿಕ ತಿಳಿಸಿದೆ.
ಅಲ್ಲದೇ ಜೈಷ್-ಎ-ಮೊಹಮ್ಮದ್ ನಿಷೇಧಿಸಲು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದೆ. ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ ಅನ್ನು 2002ರಲ್ಲಿಯೇ ನಿಷೇಧಿಸಿದ್ದೇವೆ. ಆದಾಗ್ಯೂ ಕೂಡ ಈ ಸಂಘಟನೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪಾಕಿಸ್ತಾನದ ರಾಜ್ಯ ಗೃಹ ಅಧಿಕಾರಿ ವಕ್ತಾರರು ತಿಳಿಸಿದ್ದಾರೆ.
2001 ಡಿಸೆಂಬರ್ನಲ್ಲಿಯೇ ಜೆಷ್ ಸಂಘಟನೆಯನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲಾಗಿದೆ. ಅವರ ಮುಂದಿನ ದಾಳಿ ತಡೆಯಲು ಬೇಕಾದ ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.