Kshetra Samachara
‘ನನ್ನ ಸಾವಿಗೆ ನಾನೇ ಕಾರಣ. ಈ ಕುರಿತು ಯಾರನ್ನೂ ವಿಚಾರಣೆ ಮಾಡಬೇಡಿ. ಹಾಗೆ ಮಾಡಿದರೆ, ನಾನು ಆತ್ಮವಾಗಿ ಅವರನ್ನು ಕಾಡುತ್ತೇನೆ’ ಎಂದು ಡೆತ್ನೋಟ್ ಬರೆದಿಟ್ಟು ಯುವತಿ ಕ್ಯಾರಕೊಪ್ಪ ಬಳಿ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಸ್ನೇಹಾ ಶಿವಾನಂದ ಭಜಂತ್ರಿ (17) ಆತ್ಮಹತ್ಯೆ ಮಾಡಿಕೊಂಡ ಯುವತಿ. ಧಾರವಾಡದ ಬಾಸೆಲ್ ಮಿಶನ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಹಾಸ್ಟೆಲ್ನಲ್ಲಿ ವಾಸವಾಗಿದ್ದಳು. ಫೆ. 14ರಂದು ನಸುಕಿನ ಜಾವ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್ ನೋಟ್ನಲ್ಲಿ ಏನಿದೆ?: ಒಂದು ದಿನ ಸಂಜೆ ನನಗೆ ಎದೆನೋವು ಕಾಣಿಸಿಕೊಂಡಿತ್ತು. ವೈದ್ಯರೊಬ್ಬರ ಬಳಿ ತಪಾಸಣೆಗೆ ಹೋಗಿದ್ದೆ. ‘ನಿನ್ನ ಹೃದಯದಲ್ಲಿ ತೊಂದರೆ ಇದೆ. ನೀನು ಬಹಳ ದಿನ ಬದುಕುವುದಿಲ್ಲ’ ಎಂದು ವೈದ್ಯರು ತಿಳಿಸಿದ್ದರು. ನನ್ನಿಂದ ನಮ್ಮ ಪಾಲಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಹಾಗಾಗಿ, ಯಾರನ್ನೂ ಕರೆದು ವಿಚಾರಿಸಬೇಡಿ. ಹಾಗೆ ಮಾಡಿದರೆ, ನಾನು ಆತ್ಮವಾಗಿ ನಿಮ್ಮನ್ನು ಕಾಡುತ್ತೇನೆ ಎಂದು ಯುವತಿ ಡೆತ್ನೋಟ್ನಲ್ಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಳು ಎಂದು ರೈಲ್ವೆ ಠಾಣೆ ಪೊಲೀಸರು ತಿಳಿಸಿದ್ದಾರೆ.