Public News
ಬೆಂಗಳೂರು: ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಲು ಹೋಗಿ ಬಾಲಕನೊಬ್ಬ ಬೆಂಗಳೂರು ಉತ್ತರ ತಾಲೂಕಿನ ಕೆಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಿದ್ದೇಶ್ (13) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವ.
ಸಿದ್ದೇಶ್ನ ಪಾಲಕರಾದ ಆಂಧ್ರ ಮೂಲದ ಸಿದ್ದರಾಜು ಮತ್ತು ಸಣ್ಣಮಾರಕ್ಕ ಜೀವನ ನಿರ್ವಹಣೆ ಮತ್ತು ಮಕ್ಕಳ ಉನ್ನತ ವಿಧ್ಯಾಭ್ಯಾಸಕ್ಕಾಗಿ ಕಳೆದ ಐದಾರು ವರ್ಷಗಳಿಂದ ಕೆಂಗನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು.
ಸಿದ್ದೇಶ್ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಪ್ರೇಮಿಗಳ ದಿನದಂದು ಪ್ರೇಮ ನಿವೇದನೆ ಮಾಡಿಕೊಳ್ಳಲು ಆತ ಪ್ರೇಮಪತ್ರ ಬರೆದಿಟ್ಟಕೊಂಡಿದ್ದ. ಅದನ್ನು ಕೊಡುವಷ್ಟರಲ್ಲಿ ಶಿಕ್ಷಕರ ಕೈಗೆ ಆತ ಸಿಕ್ಕಿಬಿದಿದ್ದ. ಈ ಹಿನ್ನೆಲೆಯಲ್ಲಿ ಪಾಲಕರನ್ನು ಕರೆತರುವಂತೆ ಶಿಕ್ಷಕರು ಆತನಿಗೆ ತಾಕೀತು ಮಾಡಿದ್ದರು. ತಂದೆಗೆ ವಿಷಯ ತಿಳಿದರೆ ಹೊಡೆಯುತ್ತಾರೆ ಎಂಬ ಭಯದಲ್ಲಿ ಗ್ರಾಮದ ಹೊರವಲಯದಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.