Kshetra Samachara

Local News Subject: 
ಎಚ್‍ಪಿಸಿಎಲ್ ಘಟಕದಲ್ಲಿ ಜರುಗಿದ ತುರ್ತು ನಿರ್ವಹಣಾ ಅಣುಕು ಪ್ರದರ್ಶನ
City: 
Hubballi-Dharwad
Gadag
Upload Image: 
Category: 
Others
Body: 

ಧಾರವಾಡ: ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಹಿಂದೂಸ್ತಾನ ಪೆಟ್ರೋಲಿಯಂ ಕಂಪನಿಯ ಘಟಕದಲ್ಲಿ ಶುಕ್ರವಾರ ಮಧ್ಯಾಹ್ನ ತುರ್ತು ಪರಿಸ್ಥಿತಿ, ಅವಘಡ ಸಂಭವಿಸಿದಾಗ ಅನುಸರಿಸುವ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ಸಮಿತಿ ಸದಸ್ಯರ ಸಮ್ಮುಖದಲ್ಲಿ ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು.

ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ವಿವಿಧ ತಂಡಗಳು ನಿರ್ವಹಿಸಬೇಕಾದ ಕ್ರಮ ಬಳಸಬೇಕಾದ ಸುರಕ್ಷತಾ ಸಾಮಗ್ರಿ, ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ಸೇರಿದಂತೆ ಸೌಲಭ್ಯಗಳ ಬಳಕೆ ಕುರಿತು ಅಣುಕು ಪ್ರದರ್ಶನ ಮಾಡಲಾಯಿತು.
ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಎಚ್.ಪಿ.ಸಿಯ ಎಲ್.ಪಿ.ಜಿ ನಿಯಂತ್ರಣದ ಹಿರಿಯ ವ್ಯವಸ್ಥಾಪಕ ಮಹೇಶ ಬಾಬು, ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ರಾಜೇಶ ಮಿಶ್ರಕೋಟಿ, ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಮಾಲೋಚಕ ಪ್ರಕಾಶ ವೈ.ಎಚ್., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ವಾರ್ತಾ ಅಧಿಕಾರಿ ಡಾ.ಸುರೇಶ.ಎಂ.ಹಿರೇಮಠ, ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Reach Count: 
8