Kshetra Samachara
ಹುಬ್ಬಳ್ಳಿ :ನಗರದ ಚಿಗುರು ಕೌಶಲ್ಯ ಕೇಂದ್ರ ಹಾಗೂ ಇಂಡಿಯನ್ ಓವರಸೀಸ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ತಿಂಗಳ ಬ್ಯೂಟಿ ಥೆರಪಿಸ್ಟ್ ಕೋರ್ಸ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ದೇವಕಿ ಯೋಗಾನಂದ ಸರ್ಟಿಫಿಕೆಟ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಐಒಸಿ ಬ್ಯಾಂಕ್ ಮ್ಯಾನೇಜರ್ ವಿಜಯಲಕ್ಷ್ಮೀ ಹಿರೇಮಠ ಹಾಗೂ ಚಿಗುರು ಕೌಶಲ್ಯ ಕೇಂದ್ರದ ಮುಖ್ಯಸ್ಥ ಮಂಜುನಾಥ ಅಮಾಶಿ ಇತರರು ಉಪಸ್ಥಿತರಿದ್ದರು.
ಪರಿಚಯ :ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ದೇವಕಿ ಯೋಗಾನಂದ ಅವರು ಚೇಂಬರ್ ಆಫ್ ಕಾಮರ್ಸದ ಮಹಿಳಾ ಘಟಕದ ಅಧ್ಯಕ್ಷರಾಗಿದ್ದಾರಲ್ಲದೆ ವುಮೆನ್ ಎಂಟರ್ಪ್ರೂನಿಯರ್ಸ ಕರ್ನಾಟಕ ಅಸೋಸಿಯೇಶನ್ ಎಂಬ ಎನ್ಜಿಒ ನಡೆಸುತ್ತಿದ್ದಾರೆ. ಕಿತ್ತೂರ ಚೆನ್ನಮ್ಮ, ವೀರವನಿತೆ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕೌಶಲ್ಯ ತರಬೇತಿ ಪಡೆಯಲು ಇಚ್ಛಿಸಿದವರು ಸಂಸ್ಥೆ ಮುಖ್ಯಸ್ಥ ಮಂಜುನಾಥ ಅಮಾಶಿ (9632957318) ಇವರನ್ನು ಸಂಪರ್ಕಿಸಬಹುದು. ಕಚೇರಿ ವಿಳಾಸ ,ಚಿಗುರು ಕೌಶಲ್ಯ ಕೇಂದ್ರ, ಮೇಘಾ ಅವೆನ್ಯೂ ಶಾ ಬಜಾರ್ ರೋಡ್ ಸಿಬಿಟಿ ಹತ್ತಿರ ಹುಬ್ಬಳ್ಳಿ.