Public News

News Subject: 
ಇಂದಿನ ಗ್ರಹಸ್ಥಿತಿ 03.08.2018
Upload Image: 
Body: 

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಇಂದು ಕರ್ಕಟಕ ರಾಶಿಯಲ್ಲಿ ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು ಇಂದು ಸಿಂಹರಾಶಿ ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.

ಮೇಷ ರಾಶಿ : ಇಂದು ನಿಮ್ಮ ಪಾಲಿಗೆ ಧನ ವ್ಯಯ, ಉದ್ಯೋಗದಲ್ಲಿನ ಕೆಲಸಗಳು ಅರ್ಧಕ್ಕರ್ಧ ಹಾಗೇ ಉಳಿಯುತ್ತದೆ. ಸ್ವಲ್ಪ ಆಯಾಸವೆನಿಸುತ್ತದೆ. ಆದರೆ ನಿಮ್ಮ ಸಂಗಾತಿ ನಿಮ್ಮ ಸಹಕಾರಕ್ಕೆ ಬರುತ್ತಾರೆ. ಚೈತನ್ಯ ಚಿಗುರಲಿದೆ.

ದೋಷಪರಿಹಾರ : ಅನ್ನಪೂರ್ಣೇಶ್ವರಿಗೆ ವಸ್ತ್ರ ದಾನ ಮಾಡಿ

ವೃಷಭ : ಆತ್ಮೀಯರೇ ನಿಮ್ಮ ಸಮಸ್ಯೆಗಳಿಗೆ ಇಂದು ಉತ್ತರ ಸಿಗಲಿದೆ, ನಿಮ್ಮ ನಿಮ್ಮ ಮನಸ್ಸು ಚೇತೋಹಾರಿಯಾಗಲಿದೆ. ನಿಮ್ಮ ಸ್ನೇಹಿತರು ನಿಮ್ಮ ಜೊತೆ ಸಂಚಾರಕ್ಕೆ ಬರಲಿದ್ದಾರೆ. ನೀರಿನ ವ್ಯಾಪಾರಿಗಳಿಗೆ ಉತ್ತಮ ದಿನ.

ದೋಷ ಪರಿಹಾರ : ನಿಮ್ಮ ಕುಲ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ದಾಂಪತ್ಯದಲ್ಲಿ ಸ್ವಲ್ಪ ಕಲಹ ಉಂಟಾಗಬಹುದು, ನಿಮ್ಮ ಲಾಭಕ್ಕೆ ಕತ್ತರಿಯೂ ಬೀಳುವ ಸಾಧ್ಯತೆ ಇದೆ. ನಿಮ್ಮ ಮಕ್ಕಳಿಂದ ಸಹಾಯ ಸಿಗಲಿದೆ. ಅಷ್ಟೇ ಅಲ್ಲ ನಿಮ್ಮ ಪ್ರತಿಭೆಗೆ ಶುಭಫಲ ದೊರೆಯಲಿದೆ.

ದೋಷ ಪರಿಹಾರ : ವಿಷ್ಣು ದೇವಾಲಯಕ್ಕೆ ಹೋಗಿಬನ್ನಿ.

ಕಟಕ : ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯನ್ನು ಕಾಣಲಿದ್ದೀರಿ. ಸಹೋದರರ ಸಹಕಾರ ಜೊತೆಗೆ ನಿಮ್ಮ ರೋಗ ಸ್ವಲ್ಪ ಉಲ್ಬಣಗೊಳ್ಳಲಿದೆ. ಚಿಕಿತ್ಸೆಗೆ ಮೊರೆ ಹೋಗಲೇಬೇಕಾದ ಪರಿಸ್ಥಿತಿ. ಮಾನಸಿಕ ಸದೃಢತೆ ಇರಲಿದೆ.

ದೋಷ ಪರಿಹಾರ : ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಅಕ್ಕಿ ಸಮರ್ಪಣೆ ಮಾಡಿ

ಸಿಂಹ : ನಿಮ್ಮ ಉತ್ಸಾಹ ಕಡಿಮೆಯಾಗುವ ಸಾಧ್ಯತೆ ಇದೆ, ಮನೋ ಕಾಮನೆ ಈಡೇರುವ ಅವಕಾಶಗಳು ಕಮ್ಮಿ. ನಿಮ್ಮ ರೋಗ ಉಲ್ಬಣವಾಗಬಹುದು. ನಿಮ್ಮ ಉದ್ಯೋಗದಿಂದ ಸ್ವಲ್ಪ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ದೋಷ ಪರಿಹಾರ : ಶಿವಾರಾಧನೆ ಮಾಡಿ, ಅಥವಾ ಶಿವನಿಗೆ ಗೋಧಿ ಅಭಿಷೇಕ ಮಾಡಿ

ಕನ್ಯಾ : ಆತ್ಮೀಯರೇ ಇಂದು ಇಂದು ನಿಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇದೆ. ನಿಮಗೆ ಧನ ಲಾಭವೂ ಇದೆ. ನಿಮ್ಮ ಮನೆಯಲ್ಲಿ ಅಥವಾ ವಾಹನದಲ್ಲಿ ಅವಘಡಗಳು ಸಂಭವಿಸ ಬಹುದು ಎಚ್ಚರವಾಗಿರಿ.

ದೋಷ ಪರಿಹಾರ : ಲಕ್ಷ್ಮೀ ಆರಾಧನೆ ಮಾಡಿ

ತುಲಾ : ಆತ್ಮೀಯರೇ ನಿಮ್ಮ ದೇಹದಲ್ಲಿ ಸ್ವಲ್ಪ ಆರೋಗ್ಯ ವ್ಯತ್ಯಯವಾಗಿ ಸ್ವಲ್ಪ ಉಲ್ಬಣವಾಗುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿಗೆ ಆಲೋಚನೆ ಮಾಡುವ ದಿನ, ನಿಮ್ಮ ಸಹೋದರರಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಎಚ್ಚರವಾಗಿರಿ.

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ : ಆತ್ಮೀಯರೇ, ಇಂದು ನಿಮ್ಮ ಮಾತೇ ನಿಮಗೆ ಶತ್ರು. ವೃಥಾ ಆಡಿದ ಮಾತು ಬಾಂಧವ್ಯ ಹಾಳುಮಾಡಲಿದೆ. ಮಾತನಾಡುವಾಗ ಜಾಗ್ರತೆ ಇರಲಿ. ನೀವು ಉದ್ಯೋಗಕ್ಕೆ ಅಥವಾ ಯಾವುದೇ ಕಾರ್ಯಕ್ಕೆ ಹೊರಡುವಾಗ ಅಂದುಕೊಂಡ ಕಾರ್ಯದ ಬದಲು ಮತ್ತೊಂದು ಕಾರ್ಯ ಮಾಡುವ ಸಂದರ್ಭ ಎದುರಾಗುತ್ತದೆ.

ದೋಷ ಪರಿಹಾರ : ಜಲ ದುರ್ಗೆಯ ಆರಾಧನೆ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ತಾಯಿಯಿಂದ ಸಂಪೂರ್ಣ ಸಹಾಯ ದೊರೆಯಲಿದೆ. ಅಷ್ಟೇ ಅಲ್ಲ ಓರ್ವ ಸ್ತ್ರೀ ನಿಮ್ಮ ಮನಸ್ಸನ್ನು ಅರ್ಥಮಾಡಿಕೊಂಡು ನಿಮ್ಮ ಮನೋಭೀಷ್ಟಕ್ಕೆ ತಕ್ಕಹಾಗೆ ಸಹಾಯ ಮಾಡುತ್ತಾರೆ. ನಿಮ್ಮ ದೇಹ ಆರೋಗ್ಯ ಕಳೆದುಕೊಳ್ಳುತ್ತದೆ. ಆಹಾರದಲ್ಲಿ ಏರುಪೇರಾಗಬಹುದು.

ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ ಕಡಲೆ ಬೇಳೆಯನ್ನು ದಾನ ಮಾಡಿ

ಮಕರ : ನಿಮ್ಮ ಸಹೋದರಿ ನಿಮ್ಮ ಸಹಾಯಕ್ಕೆ ಬರುತ್ತಾಳೆ. ನಿಮ್ಮ ಕಾನೂನಾತ್ಮಕ ಕಾರ್ಯಗಳು ವಿಳಂಬವಾಗುತ್ತವೆ. ವ್ಯಾಪಾರ ಸ್ಥಳದಲ್ಲಿ ಅಪಾಯವಾಗುವ ಲಕ್ಷಣಗಳಿವೆ. ಜಾಗ್ರತೆ ಇರಲಿ. ನಿಮ್ಮ ಉತ್ಸಾಹ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ. ಆದರೆ ಗಣಪತಿ ದರ್ಶನ ಮಾಡಿ

ದೋಷ ಪರಿಹಾರ : ಗಣಪತಿಗೆ ಗರಿಕೆ ಸಮರ್ಪಣೆ ಮಾಡಿ

ಕುಂಭ : ಆತ್ಮೀಯರೇ ನಿಮ್ಮ ದೇಹ ಸದೃಢಗೊಳ್ಳಲಿದೆ. ಅಷ್ಟೇ ಅಲ್ಲ ನಿಮ್ಮ ಮನೆಯಲ್ಲಿ ಎಲ್ಲರ ಸಹಾಯದಿಂದ ಧನ ಸಮೃದ್ಧವಾಗಲಿದೆ. ಉದ್ಯೋಗದಲ್ಲೂ ಉನ್ನತಿ ಹಾಗೂ ಲಾಭ ದೊರೆಯಲಿದೆ. ಆದರೆ ಸುಖ ನಾಶವೂ ಇದೆ.

ದೋಷ ಪರಿಹಾರ : ದೇವಿ ಅಪರಾಧ ಕ್ಷಮಾ ಸ್ತೋತ್ರ ಪಠಿಸಿ

ಮೀನ : ಸ್ನೇಹಿತರೆ ಇಂದು ಸುಖ ಭೋಜನ, ಮಕ್ಕಳಿಂದ ಸಹಾಯ ಹಸ್ತ. ವಿದೇಶದಿಂದ ಬಂಧುಗಳ ಆಗಮನ, ವಿಹಾರಕ್ಕೆ ಹೊರಡುವ ಮನಸ್ಸು. ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಏರ್ಪಾಡಾಗುತ್ತದೆ ಕೆಲವರಿಗೆ.

ದೋಷ ಪರಿಹಾರ : ಗಂಧರ್ವ ಹೋಮ ಅಥವಾ ಗಂಧರ್ವ ಆರಾಧನೆ ಮಾಡಿ

ಗೀತಾಸುತ.

Reach Count: 
1