Public News

News Subject: 
ನಿಮ್ಮ ಇಂದಿನ ರಾಶಿಫಲ ಹೇಗಿದೆ - 02.08.2018
Upload Image: 
Body: 

ಮೇಷ:- ಶತ್ರುಗಳು ಮೇಲುಗೈ ಸಾಧಿಸದಂತೆ ಕುಲದೇವತಾ ಪ್ರಾರ್ಥನೆ ಮಾಡಿ. ಮನಸ್ಸಿನ ಸಂಕಲ್ಪ ನೆರವೇರಿಸಿಕೊಳ್ಳುವ ಅವಕಾಶ ಗುರುವಿನಿಂದ ಬರುತ್ತದೆ. ಆದರೂ ಚತುರ್ಥ ಸುಖ ಸ್ಥಾನದ ರಾಹು ಕೆಲವು ಅಡೆತಡೆಗಳನ್ನು ಉಂಟು ಮಾಡುವನು. ಶ್ರಮದಿಂದ ಕಾರ್ಯಸಿದ್ಧಿಯಾಗುತ್ತದೆ.

ವೃಷಭ:- ಅಷ್ಟಮ ಶನಿ ಯಾವ ರೀತಿ ಫಲ ನೀಡುತ್ತಾನೆಂದು ಹೇಳಲು ಆಗುವುದಿಲ್ಲ. ಆದರೆ ಆರೋಗ್ಯದ ಮೇಲಂತೂ ಆತನ ಪ್ರಭಾವ ಹೆಚ್ಚಿರುತ್ತದೆ. ಶನಿ ಸ್ತೋತ್ರ ಪಠಿಸಿ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಮಿಥುನ:- ನಿಮ್ಮ ಸಕಾರಾತ್ಮಕ ಚಿಂತನಾ ಶಕ್ತಿಯ ವಿಚಾರದಲ್ಲಿ ಎಲ್ಲವೂ ಸರಿ ಇದೆ ಎಂದುಕೊಳ್ಳುತ್ತಿರುವಾಗಲೇ ಬಾಯಿ ತಪ್ಪಿ ಆಡಿದ ಮಾತಿನಿಂದಾಗಿ ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ಕದಡಿದಂತೆ ಆಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸಿ.

ಕಟಕ:- ವ್ಯಾಜ್ಯ ಸಂಬಂಧದ ವಿಚಾರದಲ್ಲಿನ ಹೊಂದಾಣಿಕೆಗೆ ವಿರೋಧಿಗಳು ಸಹಕಾರ ನೀಡುತ್ತಾರೆ. ಇದರಿಂದ ಸಮಾಧಾನಕರ ನಿರ್ಣಯ ಒಡಮೂಡಲು ಅವಕಾಶಗಳು ಬರುತ್ತವೆ. ದೇವಿ ಆರಾಧನೆಯಿಂದ ಒಳಿತಾಗುವುದು.

ಸಿಂಹ:- ಪಂಚಮ ಶನಿ ಕಾಟದಿಂದ ಧನನಷ್ಟ ಹಾಗೂ ಆರೋಗ್ಯದ ವಿಚಾರದಲ್ಲಿ ಹಲವು ಕಿರಿಕಿರಿ ಉಂಟಾಗುತ್ತದೆ. ದಶರಥ ಕೃತ ಶನಿಯ ಆರಾಧನೆ ಮಾಡಿ. ಕೆಲವರಿಗೆ ದೂರದ ಊರಿಗೆ ವರ್ಗಾವಣೆ ಆಗುವ ಸಾಧ್ಯತೆ ಇರುವುದು.

ಕನ್ಯಾ:- ಗ್ರಹಗಳ ಉತ್ತಮ ಸ್ಥಿತಿಯಿಂದ ಉತ್ತಮ ಅಧಿಕಾರದ ಸೂತ್ರ ಹಿಡಿಯುವ ಸಾಧ್ಯತೆ ಇದೆ. ನಿಮ್ಮ ಯೋಗ್ಯತೆಯನ್ನು ಸರಕಾರ ಗಮನಿಸಿ ನಿಮಗೆ ಉನ್ನತ ಸ್ಥಾನಮಾನ ನೀಡುವ ಸಾಧ್ಯತೆ ಇದೆ.

ತುಲಾ:- ಮನಸ್ಸಿನ ಸಂಕಲ್ಪ ಈಡೇರಿಸಿಕೊಳ್ಳಲು ದುರ್ಗಾದೇವಿಯನ್ನು ಸ್ತುತಿಸಿ. 5 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಸಿಹಿ ತಿನ್ನಿಸಿ. ಉನ್ನತ ಹುದ್ದೆ ಅಲಂಕರಿಸಲು ಅಪರೂಪದ ಅವಕಾಶ ಬರುವುದು. ಅದನ್ನು ಸ್ವೀಕರಿಸಿ.

ವೃಶ್ಚಿಕ:- ಆರ್ಥಿಕ ವಿಚಾರದಲ್ಲಿ ನಿಮ್ಮನ್ನು ಬೆಸ್ತು ಬೀಳಿಸುವ ಜನರು ನಿಮ್ಮ ಸುತ್ತಲೂ ಇರುವರು. ನಿಮಗೆ ಅವರು ಮಂಕುಬೂದಿ ಎರಚಿ ಹಣ ಲಪಟಾಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆಂಜನೇಯ ಸ್ತೋತ್ರ ಪಠಿಸಿ.

ಧನುಸ್ಸು:- ಗುರುಬಲವಿದೆ ಎಂದು ಯಾರನ್ನೂ ದಿಢೀರನೆ ನಂಬಿ ಮೋಸಹೋಗದಿರಿ. ಬ್ಯಾಂಕಿನಿಂದ ತರುವ ಅಥವಾ ಬ್ಯಾಂಕಿಗೆ ಕಟ್ಟಲು ಒಯ್ಯುತ್ತಿರುವ ಹಣದ ಬಗ್ಗೆ ಎಚ್ಚರವಿರಲಿ. ಹದ್ದಿನಂತೆ ಎಗರಿ ಹಣ ಲಪಟಾಯಿಸುವ ಸಾಧ್ಯತೆ ಇದೆ.

ಮಕರ:- ಸದ್ಯ ವರ್ತಮಾನ ಪರಿಸ್ಥಿತಿಯಲ್ಲಿ ಗ್ರಹಗಳು ನಿಮಗೆ ಸಂಪೂರ್ಣ ಸಿದ್ಧಿ ಕೊಡಲು ಅಸಮರ್ಥರಾಗಿರುತ್ತವೆ. ಹಾಗಾಗಿ ಜೀವನದಲ್ಲಿ ಸೋತು ಗೆಲ್ಲುವ ಬಯಕೆ ಈಡೇರಿಸಿಕೊಳ್ಳುವುದು ಅವಶ್ಯ.

ಕುಂಭ:- ನೀವು ಮೇಲೇರಲು ಸೂಕ್ತ ಸಮಯವಾಗಿದ್ದು, ಜನರ ನಡುವೆ ವಿಶಿಷ್ಟ ಸ್ಥಾನ ಪಡೆದು ಪ್ರಶಂಸೆ ಗಿಟ್ಟಿಸಿಕೊಳ್ಳುವಿರಿ. ಕೆಲವು ಯೋಜನೆಗಳಿಗೆ ಸೂಕ್ತ ವಹಿವಾಟುದಾರರು ದೊರೆಯುವರು.

ಮೀನ:- ಬಹುಮುಖ ಕ್ರಿಯಾಶೀಲತೆ ಫಲದಿಂದಾಗಿ ನಿಮ್ಮನ್ನು ನೀವು ಮೇಲಕ್ಕೆ ಏರಿಸಿಕೊಂಡು ಬರಲು ಸೂಕ್ತವಾದ ದಿನಗಳಾಗಿವೆ. ವ್ಯಾಪಕವಾದ ಜನಬೆಂಬಲ ನಿಮ್ಮ ಬಗೆಗಿನ ಗೌರವಾದರಗಳು ಸಮಾಜದಲ್ಲಿ ಸ್ಪಷ್ಟವಾಗುವವು. ಕುಲದೇವತಾ ಪ್ರಾರ್ಥನೆ ಮಾಡಿ.

Reach Count: 
1