Public News

News Subject: 
10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ
Upload Image: 
Body: 

ಆಡಳಿತಾತ್ಮ ಬದಲಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬರು ಎಡಿಜಿಪಿ , ಐದು ಮಂದಿ ಐಜಿಪಿಗಳು ಸೇರಿದಂತೆ ಒಟ್ಟು 10 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅರಣ್ಯ ಇಲಾಖೆಯ ಸೇವೆಯಲ್ಲಿದ್ದ ಎಡಿಜಿಪಿ ಎ.ಎಸ್.ಮೂರ್ತಿ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾವಣೆ ಮಾಡಲಾಗಿದೆ. ಉತ್ತರ ವಲಯದ ಐಜಿಪಿಯಾಗಿದ್ದ ಮುರುಗನ್ ಅವರನ್ನು ಲೋಕಾಯುಕ್ತಕ್ಕೆ ನೇಮಿಸಲಾಗಿದೆ. ಎಸಿಬಿ ಐಜಿಪಿಯಾಗಿದ್ದ ಚಂದ್ರಶೇಖರ್ ಅವರನ್ನು ಲೋಕಾಯುಕ್ತ ಸಂಸ್ಥೆಯಾಗಿರುವ ವಿಶೇಷ ತನಿಖಾ ದಳದ ಐಜಿಪಿಯನ್ನಾಗಿ ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ವಿಭಾಗದ ಚಂದ್ರಗುಪ್ತ ಅವರನ್ನು ಬೆಂಗಳೂರಿನ ಪಶ್ಚಿಮ ಸಂಚಾರಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ಬೀದರ್ ಎಸ್‍ಪಿಯಾಗಿದ್ದ ಡಿ.ದೇವರಾಜ್ ಅವರನ್ನು ನೇಮಿಸಲಾಗಿದೆ.

ಅಧಿಕಾರಿಗಳು – ಹುದ್ದೆ
ಡಾ.ಎ.ಎಸ್.ಮೂರ್ತಿ – ಎಡಿಜಿಪಿ, ರಾಜ್ಯ ಮಾನವ ಹಕ್ಕುಗಳ ಆಯೋಗ
ಎಸ್.ಮುರುಗನ್ – ಐಜಿಪಿ, ಲೋಕಾಯುಕ್ತ
ಕೆ.ವಿ.ಶರತ್‍ಚಂದ್ರ – ಐಜಿಪಿ, ದಕ್ಷಿಣ ವಲಯ, ಮೈಸೂರು
ಮನೀಶ್ ಕರ್ಬಿಕರ್ – ಐಜಿಪಿ, ಉತ್ತರ ವಲಯ ಕಲಬುರಗಿ
ಸೋಮೆಂದು ಮುಖರ್ಜಿ – ಐಜಿಪಿ, ಆಂತರಿಕ ಭದ್ರತೆ, ಬೆಂಗಳೂರು
ಎಂ.ಚಂದ್ರಶೇಖರ್ – ಐಜಿಪಿ, ವಿಶೇಷ ತನಿಖಾ ತಂಡ , ಲೋಕಾಯುಕ್ತ
ಎಚ್.ಎಸ್.ರೇವಣ್ಣ – ಡಿಐಜಿ, ಪೊಲೀಸ್ ಫೈರ್ ಸರ್ವೀಸ್
ಚಂದ್ರಗುಪ್ತ – ಡಿಸಿಪಿ, ಸಂಚಾರಿ ಪಶ್ಚಿಮ, ಬೆಂಗಳೂರು
ಡಿ.ದೇವರಾಜ್ – ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು
ಟಿ.ಶ್ರೀಧರ – ಎಸ್‍ಪಿ, ಬೀದರ್

Reach Count: 
1