Kshetra Samachara

Local News Subject: 
ಅಳ್ನಾವರ: ಗ್ರಾಮಸ್ಥರ ಸಹಾಯದಿಂದ ಬೆನಚಿ ಸೇತುವೆ ನಿರ್ಮಾಣ.
City: 
Hubballi-Dharwad
Video Thumbnail: 
PublicNext--556325--node-nid
Category: 
Infrastructure
Body: 

ವರದಿ:ಮಹಾಂತೇಶ ಪಠಾಣಿ

ಅಳ್ನಾವರ: ಅಳ್ನಾವರ ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ರಣ ಭೀಕರ ಮಳೆಗೆ ರಸ್ತೆ,ಸೇತುವೆ,ಹೊಲ,ಗದ್ದೆ ಎಲ್ಲವೂ ಛಿದ್ರ ಗೊಂಡಿದೆ. ಬೆಳೆಗಳ ನಾಶ,ರಸ್ತೆ ಬಿರುಕು ಗೊಂಡಿದ್ದು ರೈತ ಸಮುದಾಯಕ್ಕೆ ಬಹು ದೊಡ್ಡ ಹಾನಿಯಾಗಿದೆ.

ಮೊನ್ನೆ ಸುರಿದ ಭೀಕರ ಮಳೆಗೆ ಬೆನಚಿ ಮಾರ್ಗವಾಗಿ ಅಳ್ನಾವರ ಧಾರವಾಡ ಬೆನಚಿ ಸೇತುವೆ ಸಂಪೂರ್ಣ ಹಾಳಾಗಿದ್ದು, ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ತಾತ್ಕಾಲಿಕವಾಗಿ ರಸ್ತೆ ಸೇತುವೆ ನಿರ್ಮಾಣ ಮಾಡಲಾಯಿತು.

ಅದರ ಜೊತೆಗೆ ಬೆನಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆ ಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಹಾಗೂ ಶಾಸಕ ನಿಂಬಣ್ಣವರ ಸಹಾಯದಿಂದ ಬಂದಂತಹ ಆಹಾರ ಧಾನ್ಯ ಕಿಟ್ ಗಳನ್ನು ವಿತರಿಸಲಾಯಿತು.

ಅಧ್ಯಕ್ಷ ರಾದ ಸಂದೀಪ ಪಾಟೀಲ್,ಉಪಾಧ್ಯಕ್ಷ ಗಂಗವ್ವಾ ಮುಷ್ಟಗಿ.ಪಿ ಡಿ ಓ ಆನಂದ ಕೆಂಚನ್ನವರ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಭಾಗಿ ಯಾಗಿದ್ದರು.

Reach Count: 
102805
Show Detail Screen Advertisement: 
Yes