Public News

News Subject: 
ನೂತನ ಮುಖ್ಯಮಂತ್ರಿ ಬೊಮ್ಮಾಯಿಗೆ ಕೇಂದ್ರ ಸಚಿವ ಜೋಶಿ ಅಭಿನಂದನೆ
Upload Image: 
PublicNext--556274--node-nid
Category: 
Politics
Body: 

ನವದೆಹಲಿ: ಸನ್ಮಾನ್ಯ ಶ್ರೀ ಯಡಿಯೂರಪ್ಪನವರ ಸಂಪುಟದಲ್ಲಿ ಗೃಹ ಖಾತೆ ಸಚಿವರಾಗಿಯಶಸ್ವಿ ಕಾರ್ಯ ನಿರ್ವಹಿಸಿ ರಾಜ್ಯದ ಉದ್ದಗಲಕ್ಕೂ ಎಲ್ಲರ ಗಮನ ಸೆಳೆದು ಬದಲಾದ ಸನ್ನಿವೇಶದಲ್ಲಿ ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿಯವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ( ಸೋಮಪ್ಪ, ರಾಯಪ್ಪ) ಅವರ ಪುತ್ರ ಬಸವರಾಜ ಬೊಮ್ಮಾಯಿ ತಂದೆ ಹಾಗೂ ಮಗ ಸಿಎಂ ಸ್ಥಾನಕ್ಕೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.

ಇಂದು ಸಂಜೆ ನಡೆದ ಮಹತ್ವದ ರಾಜ್ಯ ಬಿಜೆಪಿ ಸಚಿವ ಸಂಪುಟ ಸಭೆಯಲ್ಲಿಯೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿದ್ದು, ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ನನ್ನ ದೀರ್ಘಕಾಲದ ಒಡನಾಡಿ ಲೋಕಸಭಾಕ್ಷೇತ್ರದ ಹೆಮ್ಮೆಯ ಶಾಸಕರಾದ ಬಸವರಾಜ ಬೊಮ್ಮಾಯಿಯವರ ಅಡಳಿತಾವಧಿಯ ಕಾಲದಲ್ಲಿ ರಾಜ್ಯ ಇನ್ನೂ ಉತ್ತುಂಗಕ್ಕೇರಲಿ, ಜನ ಮೆಚ್ಚುವ ಕಾರ್ಯ ಅವರಿಂದ ಆಗಲಿ ಎಂದು ಹಾರೈಸಿದ್ದಾರೆ.

Reach Count: 
31489
Show Detail Screen Advertisement: 
Yes