Public News

News Subject: 
ಪಬ್ಲಿಕ್ ನೆಕ್ಸ್ಟ್ ಮೂಲಕ ರಾಜ್ಯದ ಜನತೆಗೆ ಥ್ಯಾಂಕ್ಸ್ ಹೇಳಿದ ನೂತನ ಸಿಎಂ ಬೊಮ್ಮಾಯಿ
Upload Image: 
PublicNext--556272--node-nid
Category: 
Politics
Body: 

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಹೆಸರು ಅಧಿಕೃತ ಘೋಷಣೆಯಾಗಿದೆ. ಅಧಿಕೃತ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ ಅವರು ಪಬ್ಲಿಕ್ ನೆಕ್ಸ್ಟ್ ನಲ್ಲಿ ಬರಹವನ್ನು ಪೋಸ್ಟ್ ಮಾಡುವ ಮೂಲಕ ನಾಡಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರು ಪಬ್ಲಿಕ್ ನೆಕ್ಸ್ಟ್ ನಲ್ಲಿ ಹಾಕಿದ ಪೋಸ್ಟ್ ಬರಹ ಈ ಕೆಳಗಿನಂತಿದೆ.

"ನಾಡಿನ ಸಮಸ್ತ ಜನತೆಗೆ,‌ ಬಿಜೆಪಿ ನಾಯಕರಿಗೆ ಹಾಗೂ ನನ್ನ‌ ಎಲ್ಲ ಅಭಿಮಾನಿ ದೇವರಿಗೆ ನಿಮ್ಮ ಬಸವರಾಜ ಬೊಮ್ಮಾಯಿಯವರು ಮಾಡುವ ನಮಸ್ಕಾರಗಳು.. ಜನರ ಸೇವೆಯನ್ನು ಮಾಡಲು ಈ ಭಾರಿ ನನಗೆ ರಾಜ್ಯದ ಮುಖ್ಯಮಂತ್ರಿ ಆಗಿ ನೇಮಕ ಮಾಡಿ ಸೇವೆ ಮಾಡಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದಗಳು..."

-ಇಂತಿ ನಿಮ್ಮ
ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ..

ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಲ್ಲಿ ಹಾಕಿದ ಪೋಸ್ಟ್ ಲಿಂಕ್ ಇಲ್ಲಿದೆ.

https://publicnext.com/article/nid/Hubballi-Dharwad/Public-Feed/News=498...

Reach Count: 
84554
Show Detail Screen Advertisement: 
Yes