Kshetra Samachara

Local News Subject: 
ಧಾರವಾಡ : ಕ್ಯಾರಕೊಪ್ಪ ಗ್ರಾಮದ ವಡ್ಡಿನ ಕೆರೆ ಭರ್ತಿ: ಪಂಚಾಯತಿ ಕ್ರಮ
City: 
Hubballi-Dharwad
Category: 
Infrastructure
Nature
Body: 

ಧಾರವಾಡ : ತಾಲೂಕಿನಾದ್ಯಂತ ವರುಣನ ಆರ್ಭಟ ಹಿನ್ನೆಲೆಯಲ್ಲಿ ಕ್ಯಾರಕೊಪ್ಪಗ್ರಾಮದ ವಡ್ಡಿನ ಕೆರೆ ಭರ್ತಿಯಾಗಿದೆ.ಗ್ರಾಮದ ಹೊಲದ ರಸ್ತೆಯಲ್ಲಿರು ವಡ್ಡಿನ ಕೆರೆಗೆ ಈ ಹಿನ್ನೆಲೆಯಲ್ಲಿ ಪಂಚಾಯತಿ ಅಧ್ಯಕ್ಷ ಶಿವಾನಂದ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗತಮರತ್ನಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನೂ ಕೆರೆಯು ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೋಗುವ ನಾಲಾ ಬಂದಾಗಿದ್ದು, ಈ ಹಿನ್ನೆಲೆಯಲ್ಲಿ ಜೆಸಿಬಿ ಬಳಸಿ ರಸ್ತೆ ಒಡೆದು ನಾಲವನ್ನು ನಿರ್ಮಾಣ ಮಾಡಲಾಯಿತು. ಇನ್ನೂ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚರಿಕೆ ಕ್ರಮವಾಗಿ ವಡ್ಡಿನ ಕೆರೆಯ ಹೆಚ್ಚುವರಿ ನೀರನ್ನು ಹೊರಗೆ ಬೀಡಲು ಪಂಚಾಯತಿ ವತಿಯಿಂದ ಕ್ರಮ ಕೈಗೊಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

Reach Count: 
27112
Show Detail Screen Advertisement: 
Yes