Kshetra Samachara

Local News Subject: 
ಪಡುಬಿದ್ರಿ: ಕಡಲಬ್ಬರ ಹೆಚ್ಚಳ; ಅಪಾಯದಲ್ಲಿ ಬೀಚ್, ತೀರ ವಾಸಿಗಳಲ್ಲಿ ತಳಮಳ
City: 
Udupi
Mangalore
Video Thumbnail: 
PublicNext--515255--node-nid
Category: 
Infrastructure
Nature
Body: 

ಪಡುಬಿದ್ರಿ: ಕರಾವಳಿಯಲ್ಲಿ 3-4 ದಿನಗಳಿಂದ ಭಾರಿ ಗಾಳಿ- ಮಳೆಯಾಗಿದ್ದು, ಕಡಲ ಅಬ್ಬರ ಹೆಚ್ಚಾಗಿ ರಕ್ಕಸ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ.

ಸಮುದ್ರದಬ್ಬರಕ್ಕೆ ಪಡುಬಿದ್ರಿಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆ ಅಪಾಯದಲ್ಲಿದೆ. ತೀರದಲ್ಲಿರುವ ಲೈಟ್ ಕಂಬಗಳ ಬುಡದ ಮರಳು ಕೊಚ್ಚಿ ಹೋಗಿದ್ದು, ಕಂಬಗಳು ಬೀಳುವ ಸ್ಥಿತಿಯಲ್ಲಿದೆ. ಸನಿಹದಲ್ಲಿರುವ ಮರಗಳು ಮುರಿದು ಬಿದ್ದಿದೆ. ಕೆಲವೆಡೆ ತೆಂಗಿನ‌ ಮರಗಳು ಸಮುದ್ರ ಪಾಲಾಗುವುದರಲ್ಲಿದೆ.

ಕಳೆದ ವರ್ಷ ಪಡುಬಿದ್ರಿ ಬೀಚ್‌ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರವಾಗಿತ್ತು. ಕಾಂಕ್ರೀಟ್ ತಡೆಗೋಡೆ, ಇಂಟರ್ ಲಾಕ್, ತೆಂಗಿನ ಮರಗಳು
ಸಮುದ್ರ ಪಾಲಾಗಿದ್ದವು. ಬೀಚ್ ಬಳಿಯ ವೇದಿಕೆ ಹಾನಿಗೊಳಗಾಗಿತ್ತು. ಈ ಬಾರಿಯೂ ಕಡಲ್ಕೊರೆತ ತೀವ್ರವಾಗಿ ಕಾಡುತ್ತಿದ್ದು, ಮತ್ತಷ್ಟು ಹಾನಿಯಾಗುವ ಭೀತಿ ಮೂಡಿಸಿದೆ.

Reach Count: 
9277