Public News
News Subject:
ಬೇಗ ಮದ್ವೆ ಮಾಡಿ ಅಂತ ಟವರ್ ಕಂಬವೇರಿದ ಭೂಪ..!
Upload Image:
Category:
Crime
Body:
ವಿಜಯನಗರ: ಹುಡುಗಿ ಫಿಕ್ಸ್ ಆಗಿ ತಿಂಗಳುಗಳೇ ಕಳೆದರೂ ಮನೆಯಲ್ಲಿ ಬೇಗ ಮದುವೆ ಮಾಡಿಲಿಲ್ಲ ಅಂತ ಯುವಕನೋರ್ವ ಟವರ್ ಕಂಬವೇರಿ ಕುಳಿತ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.
23 ವರ್ಷದ ಚಿರಂಜೀವಿ ಟವರ್ ಏರಿ ಕುಳಿತ ಯುವಕ. ಚಿರಂಜೀವಿ ಪೋಷಕರು ಈಗಾಗಲೇ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಮಾತುಕತೆ ಕೂಡ ಮೂಗಿಸಿದ್ದಾರೆ. ಆದರೆ ಇಬ್ಬರು ಗಂಡು ಮಕ್ಕಳಿರೋ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಮಗನಿಗೆ ಮದುವೆ ಮಾಡಿದ ನಂತರ ಚಿರಂಜೀವಿಗೆ ಮದುವೆ ಅಂತ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕ, ನನಗೆ ಹುಡುಗಿ ಫೀಕ್ಸ್ ಮಾಡಿದ್ದಿರಿ ಮದುವೆಗೆ ತಡ ಯಾಕ್ ಮಾಡ್ತೀರಾ? ಮದುವೆ ಮಾಡಿ. ನನಗೆ ಮದುವೆ ಬೇಕು ಅಂತ ಹಠ ಹಿಡಿದು ಟವರ್ ಹತ್ತಿ ಕೂತಿದ್ದಾನೆ.
ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿ ಟವರ್ನಿಂದ ಪೊಲೀಸರು ಕೆಳಗಿಳಿಸಿದ್ದಾರೆ. ಅಷ್ಟೇ ಅಲ್ಲ, ಇಳಿಯೋ ಮುಂಚೆಯೇ, ನನಗ್ಯಾರು ಹೊಡಿಬಾರದು ಅಂತ ಷರತ್ತು ಹಾಕಿದ್ದ ಯುವಕ. ಈ ಹಿಂದೆಯೂ ಚಿರಂಜೀವಿ ಮದುವೆಗಾಗಿ ಹಠ ಮಾಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
Reach Count:
36547