Kshetra Samachara
Local News Subject:
ಬುಡೋಳಿ: ಗುಡ್ಡ ಕುಸಿದು 4 ಮನೆಗಳಿಗೆ ಹಾನಿ; ನುಗ್ಗಿದ ಕೆಸರು ನೀರು
City:
Udupi
Mangalore
Video Thumbnail:
Video:
Category:
Nature
Body:
ಬಂಟ್ವಾಳ: ಮಾಣಿ ಸಮೀಪದ ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಭಾರಿ ಗಾಳಿ- ಮಳೆಗೆ ಗುಡ್ಡ ಕುಸಿದು ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ಜೋಹರಾ ಅಬೂಬಕ್ಕರ್, ಬಶೀರ್, ಅವ್ವಮ್ಮ ಅಬ್ದುಲ್ ರಹಿಮಾನ್ ಮತ್ತು ಸುಲೈಮಾನ್ ಅವರ ಮನೆಯೊಳಗೆ ಮಣ್ಣು ಮತ್ತು ಕೆಸರು ನೀರು ತುಂಬಿ ವಾಸಿಸಲು ಅಯೋಗ್ಯವಾಗಿದೆ. ಗುಡ್ಡ ಕುಸಿದ ಮಣ್ಣು ಜೋಹರಾ ಅಬೂಬಕ್ಕರ್ ಅವರ ಕುಡಿಯುವ ನೀರಿನ ಬಾವಿಯನ್ನು ಮುಚ್ಚಿಬಿಟ್ಟಿದೆ.
ಬಾವಿಯಿಂದ ಎದ್ದ ನೀರು ಮತ್ತು ಬಿರುಮಳೆಗೆ ಬಂದ ಕೆಸರುನೀರು ಈ ಮನೆಗಳಿಗೆ ತುಂಬಿಕೊಂಡಿದೆ. ಸ್ಥಳಕ್ಕೆ ಪೆರಾಜೆ ಗ್ರಾಪಂ ಅಧ್ಯಕ್ಷೆ ರೋಹಿಣಿ, ಪಿಡಿಒ ಶಂಭು ಕುಮಾರ್ ಶರ್ಮ ಮತ್ತು ಗ್ರಾಮಕರಣಿಕರಾದ ಸುರಕ್ಷಾ ಭೇಟಿ ನೀಡಿದ್ದಾರೆ.
Reach Count:
11531