Kshetra Samachara

Local News Subject: 
ಕಟೀಲು: ತಾಳಮದ್ದಲೆ ಸಪ್ತಾಹ ಆರಂಭ; ಪ್ರೇಕ್ಷಕರಿಗೆ ಪ್ರವೇಶವಿಲ್ಲ
City: 
Udupi
Mangalore
Upload Image: 
PublicNext--515017--node-nid
Category: 
Religion
Body: 

ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನಡೆಯುವ 17ನೇ ವರ್ಷದ ತಾಳಮದ್ದಲೆ ಸಪ್ತಾಹ ಸೇವೆ ಹಾಗೂ ಭಾಗವತ ಸಪ್ತಾಹವನ್ನು ಇಂದು ಅರ್ಚಕ ವೆಂಕಟರಮಣ ಆಸ್ರಣ್ಣ ಉದ್ಘಾಟಿಸಿದರು. ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಕಳೆದ ಹದಿನಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ತಾಳಮದ್ದಲೆ ಸಪ್ತಾಹವನ್ನು ನಿಲ್ಲಿಸುವುದು ಬೇಡ ಎಂಬ ದೃಷ್ಟಿಯಲ್ಲಿ ಸೇವಾ ರೂಪವಾಗಿ ದೇಗುಲದಲ್ಲಿ ನಡೆಸುತ್ತಿದ್ದೇವೆ. ಕಳೆದ ವರ್ಷದಂತೆ ಈ ವರ್ಷವೂ ಲಾಕ್ ಡೌನ್ ಇರುವುದರಿಂದ ಪ್ರೇಕ್ಷಕರಿಗೆ ಪ್ರವೇಶ ಇರುವುದಿಲ್ಲ ಎಂದರು.

ಪಶುಪತಿ ಶಾಸ್ತ್ರಿ, ಸದಾನಂದ ಆಸ್ರಣ್ಣ, ಶ್ರೀನಿವಾಸ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.ಬಳಿಕ 'ಮತ್ಸ್ಯವತಾರ' ತಾಳಮದ್ದಲೆ ನಡೆಯಿತು. ಜೂ. 20ರಂದು ಸಪ್ತಾಹ ಸಮಾಪ್ತಿಗೊಳ್ಳಲಿದೆ.

Reach Count: 
2867