Kshetra Samachara
Local News Subject:
ಉಚ್ಚಿಲ-ಪಣಿಯೂರು ರಸ್ತೆ ಗುಂಡಿಗೆ ಕೊನೆಗೂ ಬಿತ್ತು ಜಲ್ಲಿ; ಸಂಚಾರಿಗಳ ನಿಟ್ಟುಸಿರು
City:
Udupi
Mangalore
Video Thumbnail:
Video:
Category:
Infrastructure
Body:
ವರದಿ: ಶಫೀ ಉಚ್ಚಿಲ
ಉಚ್ಚಿಲ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ-ಪಣಿಯೂರು ರಸ್ತೆ ಅಗಲೀಕರಣದ ಕಾಮಗಾರಿ ಹಿನ್ನೆಲೆಯಿಂದಾಗಿ ಈ ಹಿಂದೆ ರಸ್ತೆಯ ಎರಡೂ ದಿಕ್ಕಿನಲ್ಲಿ ಸುಮಾರು 5 ಅಡಿಗಳಷ್ಟು ಅಗಲಕ್ಕೆ ಗುಂಡಿ ನಿರ್ಮಾಣವಾಗಿತ್ತು.
ಈ ಅಪಾಯಕಾರಿ ಹೊಂಡ ದೊಡ್ಡ ಅನಾಹುತಕ್ಕೂ ಕಾರಣವಾಗಿತ್ತು. ಈ ಕುರಿತು 'ಪಬ್ಲಿಕ್ ನೆಕ್ಸ್ಟ್' ಮಾಡಿದ ವರದಿಗೆ ಸ್ಪಂದಿಸಿದ ಗುತ್ತಿಗೆದಾರರು ಈಗ ಕೊನೆಗೂ ಗುಂಡಿಗೆ ಜಲ್ಲಿ ತುಂಬಿಸಿ, ಮುಚ್ಚುವ ಮೂಲಕ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ. ಇದರಿಂದಾಗಿ ಪಾದಚಾರಿಗಳು ಹಾಗೂ ವಾಹನ ಸಂಚಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
- ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
Reach Count:
7756