Kshetra Samachara

Local News Subject: 
ಉಚ್ಚಿಲ-ಪಣಿಯೂರು ರಸ್ತೆ ಗುಂಡಿಗೆ ಕೊನೆಗೂ ಬಿತ್ತು ಜಲ್ಲಿ; ಸಂಚಾರಿಗಳ ನಿಟ್ಟುಸಿರು
City: 
Udupi
Mangalore
Video Thumbnail: 
PublicNext-475017-514893-Udupi-Mangalore-Infrastructure-node
Category: 
Infrastructure
Body: 

ವರದಿ: ಶಫೀ ಉಚ್ಚಿಲ

ಉಚ್ಚಿಲ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ-ಪಣಿಯೂರು ರಸ್ತೆ ಅಗಲೀಕರಣದ ಕಾಮಗಾರಿ ಹಿನ್ನೆಲೆಯಿಂದಾಗಿ ಈ ಹಿಂದೆ ರಸ್ತೆಯ ಎರಡೂ ದಿಕ್ಕಿನಲ್ಲಿ ಸುಮಾರು 5 ಅಡಿಗಳಷ್ಟು ಅಗಲಕ್ಕೆ ಗುಂಡಿ ನಿರ್ಮಾಣವಾಗಿತ್ತು.

ಈ ಅಪಾಯಕಾರಿ ಹೊಂಡ ದೊಡ್ಡ ಅನಾಹುತಕ್ಕೂ ಕಾರಣವಾಗಿತ್ತು. ಈ ಕುರಿತು 'ಪಬ್ಲಿಕ್ ನೆಕ್ಸ್ಟ್' ಮಾಡಿದ ವರದಿಗೆ ಸ್ಪಂದಿಸಿದ ಗುತ್ತಿಗೆದಾರರು ಈಗ ಕೊನೆಗೂ ಗುಂಡಿಗೆ ಜಲ್ಲಿ ತುಂಬಿಸಿ, ಮುಚ್ಚುವ ಮೂಲಕ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ. ಇದರಿಂದಾಗಿ ಪಾದಚಾರಿಗಳು ಹಾಗೂ ವಾಹನ ಸಂಚಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

- ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್

Reach Count: 
7756