Kshetra Samachara
ಕುಂದಗೋಳ : ಇದ್ದಂತಹ ಬಿಡಾ ಅಂಗಡಿಯನ್ನು ಲಾಕ್ ಡೌನ್ ಹೊಡೆತಕ್ಕೆ ಬಾಗಿಲು ಮುಚ್ಚಿ, ಹಾಸಿಗೆ ಹಿಡಿದ ತಾಯಿ, ತೀರಿ ಹೋದ ಅಣ್ಣನ ಮಕ್ಕಳನ್ನು ಸಲಹುವುದೇ ಕಷ್ಟವಾಗಿ, ಅತ್ತಿಗೆಯ ಸೇವೆಯಲ್ಲಿ ಅಂಗವಿಕಲ ವೇತನದಲ್ಲಿ ಬದುಕು ಸಾಗಿಸುತ್ತಿದ್ದ ಶಿರಾಜ್ ಅಹಮ್ಮದಖಾನ್ ಕುಟುಂಬ ಸಂಕಷ್ಟದ ಪರಿಸ್ಥಿತಿ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸ್ಟೋರಿ ಬಿತ್ತರಿಸಿ ಸಹಾಯಹಸ್ತಕ್ಕೆ ನೆರವಾಗುವಂತೆ ಜನತೆಯಲ್ಲಿ ಮನವಿ ಮಾಡಿತ್ತು.
ಈ ಸ್ಟೋರಿ ಪ್ರಕಟವಾಗಿದ್ದೇ ತಡ ಶಿರಾಜ್ ಅಹಮ್ಮದಖಾನ್ ಕುಟುಂಬದ ಕಷ್ಟಕ್ಕೆ ಧ್ವನಿಯಾದವರು ಒಬ್ಬರಾ ಇಬ್ಬರಾ ಇಸ್ರೈಲ್, ಅಮೇರಿಕಾ ದೇಶದಿಂದ ಹಿಡಿದು ಹುಬ್ಬಳ್ಳಿ ಕುಂದಗೋಳ ಜನತೆ ದಿನಸಿ, ಸಾಮಾನು ಹಾಗೂ ಧನ ಸಹಾಯ ನೀಡಿ ಅವರ ಕಷ್ಟಕ್ಕೆ ಧ್ವನಿಯಾಗಿದ್ದಾರೆ.
ಇಸ್ರೈಲ್ ದೇಶದ ಹೆಸರು ಹೇಳಲಿಚ್ಚಿಸದ ದಾನಿ ಯೊಬ್ಬರು 5 ಸಾವಿರ, ಅರಣ್ಯ ಇಲಾಖೆ ಅಧಿಕಾರಿಯೊಬ್ಬರು 5 ಸಾವಿರ, ಬಿಜೆಪಿ ನಗರ ಘಟಕದ ಅಧ್ಯಕ್ಷರೊಬ್ಬರು 5 ಸಾವಿರ, ಸಮಾಜ ಸೇವಕ ಯಲ್ಲಪ್ಪ ದಬಗೊಂದಿ 5 ಸಾವಿರ ದಿನಸಿ ಕಿಟ್ ನೀಡಿದ್ರೇ, ಬನಶಂಕರಿ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುನಂದಾ ಹೋಸಪೇಟ್ ದಿನಸಿ ಕಿಟ್ ನೀಡಿದರು ಅದರಲ್ಲೂ ವಿಶೇಷಚೇತನೊಬ್ಬ ಬರೋಬ್ಬರಿ 1300 ರೂಪಾಯಿ ಕಿರಾಣಿ ಸಾಮಾನು ತಾನೇ ತಂದು ಶಿರಾಜ್ ಅಹಮ್ಮದಖಾನ್ ಕುಟುಂಬಕ್ಕೆ ನೀಡಿದ್ದು ಬದುಕಿನ ಸಾರ್ಥಕತೆಗೆ ಹಿಡಿದ ಕೈ ಗನ್ನಡಿಯಂತಿತ್ತು.
ಕೇವಲ ದೊಡ್ಡ ಮೊತ್ತದ ಸಹಾಯವಷ್ಟೇ ಅಲ್ಲದೆ ಹಲವಾರು ಯುವಕರು ಸಂಘ ಸಂಸ್ಥೆಗಳು ಶಿರಾಜ್ ಅಹಮ್ಮದಖಾನ್ ಕುಟುಂಬಕ್ಕೆ ತಮ್ಮ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ ಅವರಿಗೆಲ್ಲರಿಗೂ ವಂದನೆಗಳು.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್