Kshetra Samachara
Local News Subject:
ಬೆಲೆ ಏರಿಕೆ ಪ್ರತಿಭಟನೆ: ಬಾಬಾ ರಾಮ್ ದೇವ್ ,ಅಣ್ಣಾ ಹಜಾರೆ ಎಲ್ಲಿ? ಕಾಂಗ್ರೆಸ್ ಪ್ರಶ್ನೆ
City:
Udupi
Mangalore
Video Thumbnail:
Category:
Politics
Body:
ಸಂತೆಕಟ್ಟೆ : ಪೆಟ್ರೋಲ್ ಮತ್ತು ತೈಲ ಬೆಲೆ ಏರಿಕೆ ವಿರುದ್ಧ ಕಳೆದೆರಡು ದಿನಗಳಿಂದ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು ಇಂದೂ ಕೂಡ ಮುಂದುವರೆದಿದೆ. ಉಡುಪಿಯ ಸಂತೆಕಟ್ಟೆ ಪೆಟ್ರೋಲ್ ಪಂಪ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದ ಕಾರ್ಯಕರ್ತರು ಕೇಂದ್ರ ,ರಾಜ್ಯ ಸರಕಾರಗಳ ವಿರುದ್ಧ ಹರಿಹಾಯ್ದರು.
ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಬೆಲೆ ಇಳಿಯಲಿದೆ ಎಂದು ಹೇಳಿದ ಬಾಬಾ ರಾಮ್ ದೇವ್ ಎಲ್ಲಿ? ಹೋರಾಟಗಾರ ಅಣ್ಣಾ ಹಜಾರೆ ಎಲ್ಲಿ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದರು. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಹೊಡೆತ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Reach Count:
8386