Kshetra Samachara

Local News Subject: 
ಕಾಪು : ಬೆಲೆ ಏರಿಕೆ ವಿರೋಧಿಸಿ ಮಜೂರು ಗ್ರಾಮೀಣ ಕಾಂಗ್ರೆಸ್ನಿಂದ ಪ್ರತಿಭಟನೆ ಇದೇನಾ ಮೋದಿಯ ಅಚ್ಛೇ ದಿನ್
City: 
Udupi
Mangalore
Category: 
Politics
Body: 

ಕಾಪು : ಡೀಸೆಲ್‌ - ಪೆಟ್ರೋಲ್ ದರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಮಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಮಜೂರು ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗಭೂಷಣ್ ರಾವ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಸಮಯದಲ್ಲಿ ಯಾವ ನಿರಂತರ ಪೆಟ್ರೋಲ್ - ಡೀಸೆಲ್ ಗ್ಯಾಸ್ ವಿದ್ಯುತ್ ದರ ಏರಿಸುವ ಮುಖಾಂತರ ಗಾಯದ ಮೇಲೆ ಬರೆ ಹಾಕುವ ಕೆಲಸ ಮಾಡಿದೆ. ಕರೋನ ಕಷ್ಟ ಕಾಲದಲ್ಲಿ ಜನರ ನೆರವಿಗೆ ನಿಲ್ಲ ಬೇಕಾದ ಸರ್ಕಾರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದುಡುವ ಕೆಲಸ ಮಾಡುತ್ತಿದೆ ಇದೇನಾ ಮೋದಿಯ ಅಚ್ಛೇ ದಿನ್ ಎಂದು
ಸಾರ್ವಜನಿಕಕರು ಪ್ರಶ್ನೆಸುವಂತಾಗಿದೆ ಎಂದರು.

ಈ ಸಂದರ್ಭ ಮುಖಂಡರಾದ ಮಹಮ್ಮದ್ ಫಾರೂಖ್, ಶರ್ಫುದ್ದೀನ್ ಶೇಖ್, ಮಹಮ್ಮದ್ ಸಾಧಿಕ್, ಭಾಸ್ಕರ್ ಕುಮಾರ್, ಇಮ್ರಾನ್, ಜಹೀರ್ ಬೆಳಪು ಮೊದಲಾದವರು ಉಪಸ್ಥಿತರಿದ್ದರು.

Reach Count: 
4702