Kshetra Samachara

Local News Subject: 
ಬೆಳಪು: ಕರುಳ ಕಾಯಿಲೆಗೆ ತುತ್ತಾದ ಎಳೆಯ; ಬಡಕುಟುಂಬದಿಂದ ಶಸ್ತ್ರಚಿಕಿತ್ಸೆಗೆ ನೆರವು ಯಾಚನೆ
City: 
Udupi
Mangalore
Video Thumbnail: 
PublicNext-474744-514381-Udupi-Mangalore-Human-Stories-node
Category: 
Human Stories
Body: 

ವರದಿ: ಶಫೀ ಉಚ್ಚಿಲ

ಕಾಪು: 14ರ ಹರೆಯದ ಬಾಲಕನೋರ್ವ ಕಳೆದ 4 ತಿಂಗಳಿನಿಂದ ಕರುಳಿನ ಕಾಯಿಲೆಯಿಂದ ಬಳಲುತ್ತಿದ್ದು, ಬಡ ಕುಟುಂಬ ಚಿಕಿತ್ಸೆ ನೀಡಲಾಗದೆ ಅಸಹಾಯಕ ಸ್ಥಿತಿಯಲ್ಲಿದೆ.

ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ರಹ್ಮತ್ ಎಂಬವರ ಇಬ್ಬರು ಮಕ್ಕಳಲ್ಲಿ ಕಿರಿಯನಾದ ಇಮಾಮ್ ಖಾನ್ ಕಾಯಿಲೆಗೆ ತುತ್ತಾದ ಬಾಲಕ. ತಂದೆ 2 ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ.
8ನೇ ತರಗತಿಯಲ್ಲಿ ಕಲಿಯುತ್ತಿದ್ದ ಇಮಾಮ್ 4 ತಿಂಗಳಿನಿಂದ ಕರುಳ ಕಾಯಿಲೆ ವಿರುದ್ಧ ಹೋರಾಡುತ್ತಿದ್ದಾನೆ.
ಅನಾರೋಗ್ಯ ಪೀಡಿತ ಮಗನ ಚಿಂತೆಯಲ್ಲಿ ತಾಯಿ ಕೊರಗುತ್ತಿದ್ದಾರೆ.

ಕುಟುಂಬದ ಈ ಪರಿಸ್ಥಿತಿಗೆ ಮರುಗಿದ ಕಾಪು ಮಲ್ಲಾರಿನ ಸರಕಾರಿ ಸಂಯುಕ್ತ ಪ್ರೌಢಶಾಲೆ ಶಿಕ್ಷಕ ಶ್ರೀನಿವಾಸ್ ಮಂಗಳೂರಿನ "ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್" ನವರಿಗೆ ತಿಳಿಸಿದ್ದು, ಜಲೀಲ್ ಮೋನು ನೇತೃತ್ವದ ತಂಡ ಸ್ಥಳೀಯರಾದ ಝಹೀರ್ ಬೆಳಪು ಹಾಗೂ ಅಮೀರ್ ಅವರು ಬಾಲಕನ ಮನೆಗೆ ಭೇಟಿ ನೀಡಿದರು.

ಈ ಮೊದಲು ಸಮಾಜ ಸೇವಕ ಮುನೀರ್ ಮಲ್ಪೆ ಮತ್ತಿತರ ದಾನಿಗಳು ಚಿಕಿತ್ಸೆಗೆ ನೆರವು ನೀಡಿದ್ದು, ಇಮಾಮ್ ತಾಯಿ ಶಸ್ತ್ರಚಿಕಿತ್ಸೆಗಾಗಿ ಸರಕಾರ ಮತ್ತು ಸಹೃದಯಿ ದಾನಿಗಳಿಂದ ನೆರವು ಯಾಚಿಸಿದ್ದಾರೆ.

ನೆರವು ನೀಡಲು ಇಚ್ಛಿಸುವವರು
ಸಂಪರ್ಕ ಸಂಖ್ಯೆ: 81529 95966,
ಗೂಗಲ್ ಪೇ, ಪೋನ್ ಪೇ ಸಂಖ್ಯೆ: 81529 95966.
ಖಾತೆ ಸಂಖ್ಯೆ: RAHAMATH
Ac/No : 6324101001234
IFSC Code : CNRB0006324
BRANCH : KAUP CANARA BANK

Reach Count: 
7665