Kshetra Samachara
Local News Subject:
ಪಡುಪಣಂಬೂರು: ಸ್ವಚ್ಛತೆ ಮೂಲಕ ಕೊರೊನಾ ನಿರ್ಮೂಲನೆ ಸಾಧ್ಯ: ಹರಿಪ್ರಸಾದ್
City:
Mangalore
Upload Image:
Category:
News
Body:
ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಎರಡನೇ ವಾರ್ಡಿನ ಮೂಡು ತೋಟ ರಸ್ತೆ ಬದಿಯ ಗಿಡಗಂಟಿಗಳನ್ನು ಹಾಗೂ ಪೊದೆಗಳನ್ನು ಸ್ಥಳೀಯ ಪಂಚಾಯತ್ ಸದಸ್ಯ ಹರಿಪ್ರಸಾದ್, ಪಿಸಿಎ ಬ್ಯಾಂಕ್ ನಿರ್ದೇಶಕ ಶ್ಯಾಮ್ ಪಡುಪಣಂಬೂರು ನೇತೃತ್ವದಲ್ಲಿ ಜ್ವಾಲಿ ಫ್ರೆಂಡ್ಸ್ ನ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಪಡಿಸಿದ್ದಾರೆ.
ಈ ಸಂದರ್ಭ ಹರಿಪ್ರಸಾದ್ ಮಾತನಾಡಿ ಗ್ರಾಮ ಗ್ರಾಮಗಳಲ್ಲಿ ಯುವಕರು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ ಮೂಲಕ ಕೊರೊನಾ ನಿರ್ಮೂಲನೆ ಸಾಧ್ಯ ಎಂದರು. ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಶಾಸಕರ ಮುಖಾಂತರ ಮತ್ತಷ್ಟು ಒತ್ತು ನೀಡಲಾಗುವುದು ಎಂದರು.
Reach Count:
1731