Public News
News Subject:
ಪಕೋಡ ಮಾರಿ ಅಂದ್ರು, ಆದ್ರೀಗ ಅಡುಗೆ ಎಣ್ಣೆ 250 ರೂ.: ಡಿಕೆಶಿ ಕಿಡಿ
Upload Image:
Category:
Politics
Body:
ತುಮಕೂರು: ಪಕೋಡ ಮಾರಿ ಅಂದ್ರು, ಅದನ್ನು ಮಾಡೋಣ ಅಂದ್ರೆ ಎಣ್ಣೆ 250 ರೂಪಾಯಿ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ತೈಲ ಬೆಲೆ ಹೆಚ್ಚಳ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ 100 ನಾಟ್ಔಟ್ ಎಂಬ ಕಾರ್ಯಕ್ರಮದ ನಡೆಸುತ್ತಿದ್ದು, ಇಂದು ಮೂರನೇ ದಿನ ಪ್ರತಿಭಟನೆ ಮುಂದುವರೆದಿದೆ. ನಗರದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರವು ಜನರ ಜೇಬಿಗೆ ಕತ್ತರಿ ಹಾಕಿ ಪಿಕ್ ಪಾಕೆಟ್ ಮಾಡುತ್ತಿದೆ. ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಬಂದು ಜನರನ್ನು ಕ್ಯೂನಲ್ಲಿ ನಿಲ್ಲಿಸಿದೆ. ಹೀಗಾಗಿ ನನ್ನ ಹೊಟ್ಟೆ ಉರಿಯುತ್ತಿದೆ. ನೋಟು ಬದಲಾವಣೆ, ಜನ್ ಧನ್, ಅಕ್ಸಿಜನ್, ಬೆಡ್, ರೆಮಿಡಿಸಿವರ್ ಗಾಗಿ ಕ್ಯೂನಲ್ಲಿ ನಿಲ್ಲಿಸಲಾಗಿದೆ. ನಂತರ ಹೆಣ ಸುಡಲೂ ಕ್ಯೂ, ಈಗ ನಾವು ರೇಷನ್ ಕಿಟ್ ಕೊಡಲೂ ಕ್ಯೂನಲ್ಲಿ ನಿಲ್ಲಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.
Reach Count:
36500